ವಿಜಯಪುರ: ಬಡತನದಲ್ಲಿ ಅರಳಿದ ಪ್ರತಿಭೆ ದ್ವೀತಿಯ ಪಿಯುಸಿಯಲ್ಲಿ ವಿಜಯಪುರ ಜಿಲ್ಲೆಯ ವಿದ್ಯಾರ್ಥಿ ಟಾಪರ್ ಆಗಿದ್ದಾನೆ. ಕಲಾ ವಿಭಾಗದಲ್ಲಿ 592 ಅಂಕ ಪಡೆದು ರಾಹುಲ್ ರಾಠೋಡ್ ರಾಜ್ಯಕ್ಕೆ ಟಾಪರ್ ಬಂದಿದ್ದಾನೆ. ರಾಹುಲ್ ತಂದೆ ತಾಯಿ ಮಹಾರಾಷ್ಟ್ರಕ್ಕೆ ಗುಳೆಹೋಗಿದ್ದಾರೆ. ಮಹಾರಾಷ್ಟ್ರದಲ್ಲಿ ತಂದೆ ತಾಯಿ ತಗಡಿನ ಶೆಡ್ ನಲ್ಲಿ ಮಗನ ಸಾಧನೆಗೆ ಸಿಹಿ ತಿನ್ನಿಸಿ ಸಂಭ್ರಮಿಸಿದ್ದಾರೆ. ಕೂಲಿಗೆಂದು ತಂದೆ ಮೋತಿಲಾಲ್,ತಾಯಿ ಸವಿತಾ ಮಹಾರಾಷ್ಟ್ರಕ್ಕೆ ಹೋಗಿದ್ದಾರೆ. ರಾಹುಲ್ ರಾಠೋಡ್ ಮೂಲತಃ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮನನಾಯಕ್ ತಾಂಡಾದ ನಿವಾಸಿಯಾಗಿದ್ದಾನೆ. ಆದ್ರೇ, ವಿಜಯಪುರ ಜಿಲ್ಲೆಯ ತಾಳಿಕೋಟೆಯಲ್ಲಿರುವ ಎಸ್ ಕೆ ಪಿಯು ಕಾಲೇಜಿಲ್ಲಿ ಅಧ್ಯಯನ ಮಾಡಿದ್ದಾನೆ. ಹಾಸ್ಟೆಲ್ ನಲ್ಲಿದ್ದು ಕಲಿಕೆ, ತನ್ನ ಸಾಧನೆಗೆ ತಂದೆತಾಯಿ, ಕಾಲೇಜಿನ ಉಪನ್ಯಾಸಕರು,ಶಿಕ್ಷಣ ವಿಭಾಗದ ಉಪನ್ಯಾಸಕಿ ಬಸಮ್ಮ ಪ್ರೇರಣೆ ನೀಡಿದ್ದಾರೆ ಎಂದು ರಾಹುಲ್ ಮನದಾಳದ ಮಾತು ಆಗಿದೆ. ಮುಂದೆ ಕಲಾವಿಭಾಗದಲ್ಲಿ ಬಿಎ ಮಾಡಿ ಎಲ್ ಎಲ್ ಬಿ ಕಲಿಯುವ ಆಸೆ ಹೊಂದಿದ್ದಡೆನೆ ಎಂದು ರಾಹುಲ್ ರಾಠೋಡ್ ಹೇಳಿದ್ದಾರೆ.