ವಿಜಯಪುರ: ಇದು ಸಾಮಾನ್ಯ ಚುನಾವಣೆ ಅಲ್ಲ. ಮೊದಲು ನಡೆಯುತ್ತಿದ್ದ ಚುನಾವಣೆ ಅಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ ಗಾಂಧಿ ಹೇಳಿದರು. ವಿಜಯಪುರ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಒಂದು ಪಾರ್ಟಿ, ಒಬ್ಬ ವ್ಯಕ್ತಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಮುಗಿಸಲು ಹೊರಟಿದ್ದಾರೆ ಎಂದು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಮೊದಲು ರಾಜ ಮಹಾರಾಜರು ಅಧಿಕಾರ ಮಾಡ್ತಿದ್ದರು. ಸಂವಿಧಾನ ಹಿಂದೂಳಿದವರಿಗೆ, ದಲಿತರಿಗೆ ಅಧಿಕಾರ ನೀಡಿದೆ. ಪ್ರಧಾನಿ ಮೋದಿ ಸಂವಿಧಾನವನ್ನು ಮುಗಿಸಲು ಯತ್ನಿಸುತ್ತಿದ್ದಾರೆ.
ಮೋದಿ ಅವರು ಗೆದ್ದರೆ ಸಂವಿಧಾನ ಮುಗಿಸುತ್ತಾರೆ, ನಾಶ ಮಾಡ್ತಾರೆಂದು ಕಿಡಿಕಾರಿದರು. ಗೃಹ ಲಕ್ಷ್ಮೀ ವಿರುದ್ಧ ಮೋದಿ ಹೇಳಿಕೆ ವಿಚಾರಕ್ಕೆ ಗೃಹ ಲಕ್ಷ್ಮಿಯಿಂದ ದಿವಾಳಿ ಆಗುತ್ತೆ ಎಂದಿದ್ದರು. ಆ ರೀತಿ ಆಗಿಲ್ಲ, ಮಹಿಳೆಯರಿಗೆ ಅನೂಕುಲವಾಗಿದೆ. ಮೋದಿಯವರೆ ಇದನ್ನ ತಿಳಿದುಕೊಳ್ಳಬೇಕು. ವರ್ಷಕ್ಕೆ 24 ಸಾವಿರ ಸಿಗುತ್ತದೆ. ಮಹಿಳೆಯರು ಈ ದೇಶ, ಕುಟುಂಬಗಳ ರಕ್ಷಣೆ ಮಾಡ್ತಿದ್ದಾರೆ. ಪುರುಷರು 8 ಗಂಟೆ ಕೆಲಸ ಮಾಡಿದ್ರೆ, ಮಹಿಳೆಯರು 16 ಗಂಟೆ ಕೆಲಸ ಮಾಡ್ತಾರೆ. ಮಹಿಳೆಯರು ಮಕ್ಕಳನ್ನ ನೋಡಿಕೊಳ್ತಾರೆ, ಅಡುಗೆ ಮಾಡ್ತಾರೆ. ಅದಕ್ಕಾಗಿ ನಾವು ಬಡ ಮಹಿಳೆಯರಿಗೆ ವರ್ಷಕ್ಕೆ 24 ಸಾವಿರ ಕೊಡ್ತಿದ್ದೇವೆ ಎಂದರು. ಚುನಾವಣೆ ನಂತರ ಇಂಡಿ ಅಲೈಯನ್ಸ್ ಅಧಿಕಾರಕ್ಕೆ ಬರುತ್ತೆ. ಆಗ ಬಡ ಕುಟುಂಬಗಳ ಲಿಸ್ಟ್ ರೆಡಿಯಾಗುತ್ತೆ. ಪ್ರತಿ ಬಡ ಕುಟುಂಬದಿಂದ ಒಬ್ಬ ಮಹಿಳೆಯನ್ನ ಆಯ್ಕೆ ಮಾಡ್ತೆವೆ. ಅವರಿಗೆ ವರ್ಷಕ್ಕೆ ಒಂದು ಲಕ್ಷ ಕೊಡ್ತೇವೆ. ಕರ್ನಾಟಕ ಸರ್ಕಾರ 24 ಸಾವಿರ , ಕೇಂದ್ರದಲ್ಲಿ ನಾವು ವರ್ಷಕ್ಕೆ ಒಂದು ಲಕ್ಷ ಕೊಡ್ತೇವೆ.
ಕರ್ನಾಟಕದಲ್ಲಿ ಮಹಿಳೆಯರಿಗೆ 1 ಲಕ್ಷ 24 ಸಾವಿರ ಸಿಗುತ್ತೆ. ಬ್ಯಾಂಕ್ ಅಕೌಂಟಲ್ಲಿ ಕಟಾ.. ಕಟ್. ಕಟಾ ಕಟ್ ಅಂತ ಹಣ ಸಿಗುತ್ತೆ. ಬಡವರು ಬಡತನದಿಂದ ಹೊರ ಬರುವುದಿಲ್ಲವೋ ಅಲ್ಲಿಯವರಿಗೆ ಪ್ರತಿ ತಿಂಗಳು 10.5 ಸಾವಿರ ಕೊಡ್ತಾ ಹೋಗ್ತವೇ. ಅಕೌಂಟಿಗೆ ಕಟಾಕಟ್.. ಕಟಾಕಟ್ ಹಣ ಸಿಗ್ತಾ ಹೋಗುತ್ತೆ. ಮೋದಿ ಕೋಟ್ಯಾಧಿಶರಿಗೆ ಹಣ ನೀಡಿ, ಬಡವರಿಗೆ ಕೂಲಿ ಸಿಗದೆ ಇರೋ ಹಾಗೇ ಮಾಡಿದ್ದಾರೆ. ಇವತ್ತು ಯುವಕರು ನಿರುದ್ಯೋಗಿಗಳಾಗಿ ಕೆಲಸ ಕೇಳ್ತಿದ್ದಾರೆ. ಶ್ರೀಮಂತರು ಅವರ ಮಕ್ಕಳಿಗೆ ವರ್ಷದ ವರೆಗೆ ಅಪ್ರೆಂಟಿಸ್ ನೌಕರಿ ಕೊಡ್ತಾರೆ, ಬಳಿಕ ಸಿಗೊಲ್ಲ. ಬಡ ಕುಟುಂಬದ ಯುವಕರಿಗೆ ನೌಕರಿಗೆ ಸಿಗೊಲ್ಲ. ಇಂಡಿ ಅಲೈನ್ಸ ಭಾರತದ ಎಲ್ಲ ನಿರುದ್ಯೋಗ ಯುವಕರಿಗೆ ನೌಕರಿ ಕೊಡಲಿದೆ. ಕೋಟ್ಯಾಂತರ ನಿರುದ್ಯೋಗಗಳಿಗೆ ನೌಕರಿ ಸಿಗಲು ತಯಾರಾಗಿದೆ. ಖಾಸಗಿ ಸಂಸ್ಥೆ, ಸರ್ಕಾರಿ ಉದ್ಯಮಗಳಲ್ಲಿ ಅಪ್ರೆಂಟಿಸ್ ನೌಕರಿ ನೋಡಲಿದೆ. ಸರ್ಕಾರದಿಂದ ಪದವಿ, ಡಿಪ್ಲೊಮಾ ಮಾಡಿದವರಿಗೆ ನೌಕರಿ. ಕಡ್ಡಾಯ ಕೂಲಿಯಂತೆ ನಿರುದ್ಯೋಗಿ ಯುವಕರಿಗೆ ನೌಕರಿ ಕೊಡ್ತೇವೆ. ಅವರ ಬ್ಯಾಂಕ್ ಅಕೌಂಟ್ ಗೆ ಟಕಾ ಟಕ್ ಟಕಾ ಟಕ್ ಹಣ ಸಿಗುತ್ತೆ. ಮೋದಿ ರೈತರ ಸಾಲ ಮನ್ನಾ ಮಾಡಿಲ್ಲ. ರೈತರಿಗೆ ಕಾನೂನಿನಂತೆ ಎಮ್ ಎಸ್ ಪಿ ದರ ಕೊಡ್ತಿಲ್ಲ. ನಮ್ಮ ಸರ್ಕಾರ ಬಂದ ತಕ್ಷಣ ನಾವು ರೈತರ ಸಾಲ ಮನ್ನಾ ಮಾಡ್ತೇವೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರ ಸಂಬಳವನ್ನ ದುಪ್ಪಟ್ಟು ಮಾಡ್ತೇವೆ. ಅಗ್ನಿವೀರ ಯೋಜನೆ ಸೈನಿಕರಿಗೆ ಮಾಡಿದ ಅಪಮಾನ ಆಗಿದೆ. ಅದಕ್ಕಾಗಿ
ಅಗ್ನಿವೀರ ಯೋಜನೆ ರದ್ದು ಮಾಡ್ತೇವೆ. ಮೋದಿ ಭಾರತದ ಜನರ ಮೇಲೆ ತಪ್ಪಾದ ಜಿಎಸ್ಟಿ ಹಾಕಿದ್ದಾರೆ. 5 ತರದ ಜಿಎಸ್ಟಿ ಹಾಕಿದ್ದಾರೆ. 100 ರುಪಾಯಿ ಜಿಎಸ್ಟಿ ಕೊಟ್ಟಾಗ 13 ರೂಪಾಯಿ ಬರುತ್ತೆ. ಕರ್ನಾಟಕ ರಾಜ್ಯದ ಜನರ ಜೊತೆಗೆ ಮೋದಿ ಅನ್ಯಾಯ ಮಾಡ್ತಿದ್ದಾರೆ. ನಾವು ಜಿಎಸ್ ಟಿ ಬದಲು ಮಾಡಿ ಅನ್ಯಾಯ ಸರಿ ಮಾಡ್ತೇವೆ. ಮೋದಿ ಹೆದರಿದ್ದಾರೆ, ಹೆದರಿ ಮಾತನಾಡ್ತಿದ್ದಾರೆ, ಇನ್ನೂ ವೇದಿಕೆ ಮೇಲೆ ಕಣ್ಣೀರು ಹಾಕಲಿದ್ದಾರೆ. ಪಾಕಿಸ್ತಾನ, ಚೀನಾ ಬಗ್ಗೆ ಮಾತನಾಡ್ತಾರೆ, ಮೊಬೈಲ್ ಟಾರ್ಚ್ ಬೆಳಗಿಸಲು ಹಚ್ತಾರೆ. ಆದ್ರೆ, ದೇಶದ ಸಮಸ್ಯೆ ಬಗ್ಗೆ ಮಾತನಾಡಲ್ಲ. ಮೋದಿ ಬಡವರಿಂದ ಹಣ ವಸೂಲಿಗೆ ಮಾಡಿದ್ದಾರೆ. ಕೋಟ್ಯಾಧೀಶರನ್ನ ಸೃಷ್ಟಿ ಮಾಡಿದ್ದಾರೆ. 25 ಜನರ ಬಳಿ ಇಡೀ ಭಾರತದ ಬಳಿ ಇರುವಷ್ಟು ಹಣ ಇದೆ. ಇವರನ್ನು ಮೋದಿ ಸೃಷ್ಟಿ ಮಾಡಿದ್ದಾರೆ. ಹಿಂದೂಳಿದವರಿಗೆ, ಆದಿವಾಸಿ, ದಲಿತರಿಗೆ ಇಲ್ಲಿ ಅವಕಾಶ ಇಲ್ಲ. ಮೋದಿ ಅರಬ್ ಪತಿಗಳಿಗೆ ನೀಡಿದಷ್ಟು ಹಣವನ್ನ ನಾವು ಭಾರತೀಯರಿಗೆ ಕೊಡ್ತೇವೆ ಎಂದರು.