ವಿಜಯಪುರ: ವಿಜಯಪುರ ಜಿಲ್ಲೆಯ ವಿವಿಧ ಕಡೆ ಗುಡುಗು ಸಿಡಿಲು ಸಹಿತ ಮಳೆಯಾಗಿದ್ದು, ಮುದ್ದೇಬಿಹಾಳ ತಾಲೂಕಿನಲ್ಲಿ ಮಳೆಯಿಂದಾಗಿ ಹಲವು ಅವಾಂತರ ನಡೆದಿದೆ. ಮುದ್ದೇಬಿಹಾಳ ತಾಲ್ಲೂಕಿನ ಗೋನಾಳ ಎಸ್ ಎಚ್ ಗ್ರಾಮದಲ್ಲಿ ಸಿಡಿಲು ಬಡಿದು ಎರಡು ಹಸುಗಳ ಸಾವನಪ್ಪಿವೆ. ಗ್ರಾಮದ ಬಸವರಾಜ ಪಾಟೀಲ್, ಹಾಗೂ ಬಸಪ್ಪ ಉಪ್ಪಲದಿನ್ನಿ ಎಂಬುವರಿಗೆ ಸೇರಿದ ಹಸುಗಳ ಸಾವನಪ್ಪಿವೆ. ಅದೇ ರೀತಿ ಮುದ್ದೇಬಿಹಾಳ ತಾಲೂಕಿನ ಅಡವಿ ಹುಲಗಬಾಳ ಗ್ರಾಮದಲ್ಲಿ ಸಿಡಿಲು ಬಡಿದು ಹಣಮಂತ ಕಂಬಾರ ಎಂಬ ರೈತನ ಹಸು ಸಾವನಪ್ಪಿದ್ದೆ. ಇನ್ನು ಸಿಡಿಲು ಬಡಿದು ಮುದ್ದೇಬಿಹಾಳ ತಾಲೂಕಿನ ದೇವೂರ ಗ್ರಾಮದ ಹಣಮಂತ ಅಡಿಯಾಳ ಎಂಬ ರೈತನ ಎಮ್ಮೆ ಸಾವನಪ್ಪಿದ್ದು, ತಾಲೂಕಿನಲ್ಲಿ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಹಲವೆಡೆ ಮರಗಳು ಉರುಳಿ ಬಿದ್ದಿವೆ.