![](https://karnataka1news.com/wp-content/uploads/2023/09/IMG-20230901-WA0037-1024x458.jpg)
ಗೋವಾ: ಸಹೋದರ ಹಾಗೂ ಸಹೋದರಿಯ ನಡುವಿನ ಪ್ರೀತಿಯ ಬೆಸುಗೆಯೇ ರಕ್ಷಾ ಬಂಧನ. ಪವಿತ್ರ ರಕ್ಷಾ ಬಂಧನವನ್ನು ಗೋವಾದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಆಚರಣೆ ಮಾಡಲಾಯಿತು. ರಾಖಿ ಒಡಹುಟ್ಟಿದವರ ನಡುವಿನ ಮುರಿಯಲಾಗದ ಮತ್ತು ವಿಶೇಷ ಬಂಧಗಳನ್ನು ಆಚರಿಸುವ ಮಂಗಳಕರ ಹಿಂದೂ ಹಬ್ಬವಾಗಿದೆ. ಸಹೋದರಿಯರು ತಮ್ಮ ಸಹೋದರನ ಕೈಗಳಿಗೆ ರಾಖಿ ಕಟ್ಟಿ, ಹಣೆಯ ಮೇಲೆ ತಿಲಕವನ್ನು ಹಚ್ಚಿ, ಅವರ ಸಮೃದ್ಧಿ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಿದರು. ಸಹೋದರರು ತಮ್ಮ ಸಹೋದರಿಯರನ್ನು ರಕ್ಷಿಸುವ ಭರವಸೆಯನ್ನು ನೀಡಿ ಉಡುಗೊರೆಗಳನ್ನು ನೀಡಿದರು. ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ಗೋವಾ ಸಂಘಟನೆಯ ರಾಜ್ಯಾಧ್ಯಕ್ಷ ಮಂಜು ನಾಟಿಕರ್, ಕಾರ್ಯದರ್ಶಿ ಶಿವಾನಂದ ಮಸಬಿನಾಳ, ರಾಜ್ಯ ಸಂಚಾಲಕ ವೈ.ಎಸ್. ಬಿರಾದರ್, ಉಪಾಧ್ಯಕ್ಷ ಮಹಾಂತೇಶ ಕಾರಿಗೇರಿ, ಮಾಧ್ಯಮ ಸಂಚಾಲಕ ರಮೇಶ್ ಮಾದರ, ಚಂದ್ರಶೇಖರ್ ವಾಲ್ಮೀಕಿ, ಯುವ ಮೋರ್ಚಾ ಅಧ್ಯಕ್ಷ ಯಶವಂತ್ ಕಿಂಗ್, ಯುವ ಮೋರ್ಚಾ ಉಪಾಧ್ಯಕ್ಷ ಮನೀಶ್ ಚಲವಾದಿ, ಮಹಿಳಾ ಸಂಘಟನೆಯ ಉಪಾಧ್ಯಕ್ಷ ಶಿವಮ್ಮ ಹರಿಜನ್, ಪಾರ್ವತಿ ಚಲವಾದಿ ಸುಮಿತ್ರ ಭಾಗ್ಯಶ್ರೀ ನಾಯಕ್ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
![](https://karnataka1news.com/wp-content/uploads/2023/09/IMG-20230901-WA0035-1024x458.jpg)