ವಿಜಯಪುರ: ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಮಲತಾಯಿ ಧೋರಣೆ ಆಗುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಬಹುತೇಕ ತಾಲೂಕುಗಳಲ್ಲಿ ಬರ ಘೋಷಣೆಯಾಗಿ 7 ತಿಂಗಳಾದರೂ 18 ಸಾವಿರ ಕೋಟಿ ಹಣ ಬಿಡುಗಡೆ ಮಾಡಲಿಲ್ಲ. ಪ್ರಧಾನಿ ಮೋದಿ, ಅಮೀತ್ ಶಾಗೆ ನಮ್ಮ ರಾಜ್ಯದ ಜನತೆ ಮೇಲೆ ಕೋಪ ಇದೆ ಎಂದು ಆರೋಪಿಸಿದರು. ಕರ್ನಾಟಕ ಅಂದರೆ ಅವರಿಗೆ ಅಸಡ್ಡೆ ಮಾಡುತ್ತಿದ್ದಾರೆ. ವಿಧಾನಸಭೆಯಲ್ಲಿ ಓಟ್ ಹಾಕಿಲ್ಲ ಎಂದು ರೈತರ ಮೇಲೆ ಕೋಪ ತೋರಿಸುತ್ತಿದ್ದಾರೆ. ರಾಜಕೀಯ ದುರುದ್ದೇಶದಿಂದ ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. 4 ಲಕ್ಷ 34 ಸಾವಿರ ಕೋಟಿ ಕೇಂದ್ರಕ್ಕೆ ಆದಾಯ ಹೋಗುತ್ತದೆ. ಅಲ್ಲಿಂದ ನಮಗೆ ಒಂದು ರೂಪಾಯಿಯಲ್ಲಿ 13 ಪೈಸೆ ಬರುತ್ತಿದೆ. ಬಜೆಟ್ ಹೆಚ್ಚಾಗಿರುವುದರಿಂದ ಹೆಚ್ಚಿಗೆ ಹಣ ಕೊಡಬೇಕು ಎಂದು ಅನೇಕ ಬಾರಿ ಮನವಿ ಮಾಡಿದರೂ ಅವರು ಕೊಟ್ಟಿಲ್ಲ. ನಮ್ಮ ರಾಜ್ಯಕ್ಕೆ 44 ಸಾವಿರ ಕೋಟಿ ಕೊಡ್ತಾರೆ. ಗೋವಾ ಸೇರಿದಂತೆ 7 ರಾಜ್ಯಗಳಿಗೆ 1 ಲಕ್ಷ 21 ಸಾವಿರ ಕೋಟಿ ಕೊಡ್ತಾರೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಸುಳ್ಳು ಹೇಳ್ತಾರೆ ಎಂಬುದು ಮಕ್ಕಳ ಬಾಯಲ್ಲೂ ಬರುತ್ತಿದೆ. ಇವರ ಸರ್ಕಾರ ಬಂದು 10 ವರ್ಷ ಆದರೂ ಕೃಷ್ಣಾ ಜಲಾಶಯ ಎತ್ತರಿಸಲು ಆಗುತ್ತಿಲ್ಲ. ಇದನ್ನೆಲ್ಲ ಎಂಪಿಗಳು ಮಾತಾಡಬೇಕು. ಅವರು ಯಾರೂ ಇದರ ಬಗ್ಗೆ ಮಾತಾಡಲಿಲ್ಲ. ಅದಕ್ಕಾಗಿ ಎಲ್ಲಾರೂ ಒಟ್ಟಾಗಿ ಹೋಗಿ ಪ್ರಧಾನಿಗಳನ್ನು ಭೇಟಿಯಾಗಿ ಬರ ಪರಿಹಾರ ಕೇಳಬೇಕಿತ್ತು ಅವರು ಕೇಳಿಲ್ಲ. ಟ್ಯಾಕ್ಸ್ ಹಣ ಹೆಚ್ಚಿಗೆ ಬೇಕು ಎಂದು ಕೇಳಬೇಕಿತ್ತು, ಅದನ್ನೂ ಕೇಳಲಿಲ್ಲ. ರಾಜ್ಯದ ಹಿತಾಸಕ್ತಿ ಬಯಸದವರು, ರೈತರಿಗೆ ಅನ್ಯಾಯ ಆದಾಗ ಸುಮ್ಮನೆ ಇರುವವರು ನಮಗೆ ಬೇಕಾಗಿಲ್ಲ ಎಂದರು. ಸಿಎಂ ಸಿದ್ಧರಾಮಯ್ಯ ಪುತ್ರ ರಾಕೇಶ ನಿಧನ ಅನುಮಾನ ಎಂದು ಹೆಚ್ ಡಿ ಕೆ ಹೇಳಿಕೆ ವಿಚಾರದಲ್ಲಿ ಏನಾದರು ದಾಖಲೆ ಇದ್ದರೆ ಕೊಡಿ. ದಾಖಲೆ ಇದ್ದರೆ ಕೊಡಲಿ ಬಿಡಿ. ರಾಜಕೀಯದಲ್ಲಿ ಇದೆಲ್ಲಾ ಆಗುತ್ತೆ, ಹಾಗೆ ಹೇಳ್ತಿರ್ತಾರೆ. ಅವರ ಸಾವಿನ ಬಗ್ಗೆ ಗೊತ್ತಿದ್ದರೆ ಜನತೆಗೆ ಹೇಳಲಿ. ಸಹಜ ಸಾವು ಆಗಿರದಿದ್ದರೆ ಪೋಸ್ಟಮಾರ್ಟಂ ಮಾಡಿಯೇ ಕಳಿಸ್ತಾರೆ, ವಿದೇಶದಲ್ಲಿ ಕಾನೂನುಗಳು ಕಟ್ಟುನಿಟ್ಟಾಗಿ ಇವೆ. ಏನಾದರೂ ಒಂದು ಹೇಳಿದರೆ ವಿಚಾರ ಡೈವರ್ಟ್ ಮಾಡಲು ಹೀಗೆ ಹೇಳ್ತಾರೆ ಎಂದು ಕಿಡಿಕಾರಿದರು.
ಬಿಜೆಪಿಯವರು ಮಹಿಳಾ ವಿರೋಧಿಗಳು. ಅಮೀತ್ ಶಾ ಮಾತೃಶಕ್ತಿ ಎಂದು ಹೇಳ್ತಾರೆ. ಮಣಿಪುರದಲ್ಲಿ ಮಹಿಳೆ ಬಟ್ಟೆ ಬಿಚ್ಚಿ ದೌರ್ಜನ್ಯ ನಡೆದಾಗ ಎಲ್ಲಿ ಹೋಗಿತ್ತು ಮಾತೃಶಕ್ತಿ? ಉತ್ತರ ಪ್ರದೇಶದಲ್ಲಿ ಕಾನೂನು ಇಲ್ಲ. ತಪ್ಪು ಮಾಡಿದರೆ ಶೂಟ್ ಮಾಡ್ತಾರೆ. ಒಬ್ಬರು ಮಾಡಿದರೆ ಮನೆಯವರೆಲ್ಲ ಬಲಿಯಾಗಬೇಕಾ? ರಸ್ತೆಯಲ್ಲಿ ರೈತರು ಎರಡು ವರ್ಷ ಪ್ರತಿಭಟಿಸಿ, 700 ಜನ ರೈತರು ರಸ್ತೆಯಲ್ಲೇ ಸತ್ತರು, ಅವರು ಮನುಷ್ಯರಲ್ಲವಾ? ಬಿಜೆಪಿಯವರದ್ದು ದ್ವಂದ್ವ ನೀತಿ ಆಗಿದೆ. ಕಾಂಗ್ರೆಸ್ನವರು ಯಾರಾದರೂ ಹೀಗೆ ಮಾಡಿದ್ದರೆ ಇಷ್ಟೊತ್ತಿಗೆ ಬೊಬ್ಬೆ ಹೊಡೆಯುತ್ತಿದ್ದರು ಎಂದು ವಾಗ್ದಾಳಿ ನಡೆಸಿದರು.