ವಿಜಯಪುರ: ರಂಜಾನ್ ಸಿನೆಮಾ ಇದೇ ಏಪ್ರಿಲ್ 21ಕ್ಕೆ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ ಎಂದು ರಂಜಾನ್ ಸಿನೆಮಾ ನಟ ಸಂಗಮೇಶ ಉಪಾಸೆ ಹೇಳಿದರು. ವಿಜಯಪುರ ನಗರದ ಖಾಸಗಿ ಹೋಟೆಲ್ನಲ್ಲಿ ರವಿವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುವ ಅವರು, ರಾಜ್ಯಾದ್ಯಂತ 70 ಸಿನೇಮಾ ಮಂದಿರದಲ್ಲಿ ಬಿಡುಗಡೆ ಆಗಲಿದೆ ಎಂದರು. ಹ್ಯಾಪಿಕೇಕ್ ವಿಜಯಪುರ ಹಾಗೂ ಯುನಿವರ್ಸಲ್ ಸ್ಟುಡಿಯೋ ನೇತೃತ್ವದಲ್ಲಿ ಇಂದು ರಂಜಾನ್ ಸಿನೇಮಾ ಟ್ರೈಲರ್ನ್ನು ಹಿಂದೂ ಮುಸ್ಲಿಂ ಧರ್ಮಗುರುಗಳು ಬಿಡುಗಡೆಗೊಳಿಸಿದರು. ಹಸಿವು, ಬಡತನ, ರೈತರ ಸಮಸ್ಯೆ ಸೇರಿದಂತೆ ಧರ್ಮದ ಆಧಾರಿತ ರಂಜಾನ್ ಸಿನೆಮಾ ಇದಾಗಿದೆ ಎಂದರು. ಸಿಲ್ಲಿಲಲ್ಲಿಯ ಗೋವಿಂದ ಇಂದು ರಂಜಾನ್ನಲ್ಲಿ ಮೂಡಿ ಬಂದಿದ್ದಾನೆ. ಈಗಾಗಲೇ ಚಿತ್ರದ ಎರಡು ಹಾಡುಗಳನ್ನು ಬಿಡುಗಡೆ ಆಗಿದೆ ಎಂದರು.