ವಿಜಯಪುರದಲ್ಲೊಂದು ವಿಚಿತ್ರ ಆಚರಣೆ | ಒಂದಲ್ಲ, 3 ಬಾರಿ! ಓಡಿ ಬಂದು ಕಲ್ಲಿಗೆ ತಲೆ ಜಜ್ಜಿ ಹರಕೆ ತೀರಿಸ್ತಾರೆ ಭಕ್ತರು..!
ವಿಜಯಪುರ: ಜಗತ್ತಿನಲ್ಲಿರುವ ಚಿತ್ರ ವಿಚಿತ್ರ ಆಚರಣೆಗಳು ಬೆಳಕಿಗೆ ಬರುತ್ತಿರುತ್ತವೆ. ಅದರಂತೆಯೇ ವಿಜಯಪುರ ಜಿಲ್ಲೆಯಲ್ಲಿ ಕಲ್ಲಿಗೆ ತಲೆ ಜಜ್ಜಿಕೊಳ್ಳುವ ಮೂಲಕ ಹರಕೆ ತೀರಿಸುವ ವಿಚಿತ್ರ ಸಂಪ್ರದಾಯವೊಂದು ಬೆಳಕಿಗೆ ಬಂದಿದೆ. ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಗಣಿ ಗ್ರಾಮದಲ್ಲಿ ಸೋಮೇಶ್ವರ ಜಾತ್ರೆಯಲ್ಲಿ ಆಚರಣೆ ಮಾಡಲಾಗುತ್ತದೆ. ಈ ಜಾತ್ರೆಯಲ್ಲಿ ವಿಚಿತ್ರ ಹರಕೆಯನ್ನ ಭಕ್ತರು ಸಮರ್ಪಿಸುತ್ತಾರೆ. ಕಲ್ಲಿಗೆ ತಲೆ ಜಜ್ಜಿಕೊಳ್ಳುವ ಮತ್ತು ಕಬ್ಬಿನ ಗುಂಡಿನಿಂದ ಬೆನ್ನಿಗೆ ಹೊಡೆದುಕೊಳ್ಳುವ ಮೂಲಕ ಜನರು ದೇವರಿಗೆ ಹರಕ್ಕೆ ಒಪ್ಪಿಸುತ್ತಾರೆ. ಕಲ್ಲಿಗೆ ತಲೆ ಜಜ್ಜಿಕೊಳ್ಳುವ ಜಾತ್ರೆ ಎಂದೇ ಇದು ಫೇಮಸ್ ಆಗಿದೆ. ಮೈ ನಡುಗಿಸಿ ಓಡೋಡಿ ಬಂದು ಕಲ್ಲಿಗೆ ಡಿಕ್ಕಿ ಹೊಡೆಯುವ ಮೂಲಕ ಭಕ್ತರು ಹರಕೆ ತೀರಿಸುತ್ತಾರೆ. ದೇಗುಲದ ಬಳಿಯ ಕಲ್ಲಿಗೆ ತಲೆ ಜಜ್ಜಿಕೊಂಡು ಭಕ್ತಿ ಸಮರ್ಪಿಸ್ತಾರೆ. ಇನ್ನು ಭಕ್ತರು
ಬೇಡಿದ ವರವನ್ನು ನೀಡುವ ದೇವರು ಸೋಮೇಶ್ವರ ದೇವರು. ಬೇಡಿದ ವರವನ್ನು ನೀಡುವ ದೇವರು ಎಂದೇ ಪ್ರಸಿದ್ಧಿ. ಹಾಗಾಗಿ ಇಲ್ಲಿ ಭಕ್ತರು ಹರಕೆ ಕಟ್ಟುತ್ತಾರೆ. ದೇವರ ಮುಂದೆ ಬೇಡಿಕೊಂಡವರ ಬೇಡಿಕೆ ಈಡೇರಿದವರು ಬಿಂಗಿಗಳಾಗಿ ವೃತಾರಚಣೆ ಮಾಡುತ್ತಾರೆ. ಪ್ರತಿಯೊಬ್ಬ ಬಿಂಗಿಯೂ ಮೂರು ಬಾರಿ ಕಲ್ಲಿಗೆ ತಲೆ ಜಜ್ಜುವುದು ಇಲ್ಲಿನ ಸಂಪ್ರದಾಯವಾಗಿದೆ. ಬಿಂಗಿಯರು ಅಂದ್ರೆ ಒಂದು ರೀತಿ ದೇವರ ಮಾಲೆ ಹಾಕಿದವರು. ಬಿಂಗಿಗಳು ಕಾರ್ತಿಕ ಮಾಸದ ಆರಂಭದಿಂದ ಅಂತ್ಯದವರೆಗೂ ಎಲ್ಲಾ ದುಶ್ಚಟಗಳನ್ನ ಬಿಟ್ಟು ಕಠಿಣ ವ್ರತ ಆಚರಿಸುತ್ತಾರೆ. ಜಾತ್ರೆ ದಿನದಂದು ಅದ್ಧೂರಿಯಾಗಿ ಮೆರವಣಿಗೆ ಮೂಲಕ ದೇಗುಲಕ್ಕೆ ಆಗಮಿಸುತ್ತಾರೆ. ಹೀಗೆ ವ್ರತ ಆಚರಿಸಿದವರೇ ಸೋಮೇಶ್ವರನನ್ನ ಆರಾಧಿಸುತ್ತಾರೆ. ಇನ್ನು ಗ್ರಾಮದ ಭಕ್ತರೆಲ್ಲರೂ ಮಡಿಯಿಂದ ತಯಾರಿಸಿದ ನೈವೇದ್ಯವನ್ನು ಬಿಂಗಿಗಳಿಗೆ ಅರ್ಪಿಸ್ತಾರೆ. ಯಾವುದೇ ಕಷ್ಟವನ್ನು ಹೇಳಿಕೊಂಡು ಬರುವ ಭಕ್ತರಿಗೆ ಸೋಮೇಶ್ವರ ದೇವರು ಒಳಿತು ಮಾಡುತ್ತಾನೆ ಅನ್ನೋ ನಂಬಿಕೆ ಭಕ್ತರದ್ದು.