ವಿಜಯಪುರ: ರೌಡಿಶೀಟರ್ ಹತ್ಯೆ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ದೇವರ ನಾವದಗಿಯಲ್ಲಿ ಜುಲೈ 11 ರಂದು ಆಲಮೇಲ ನಿವಾಸಿ ಮಾಳಪ್ಪ ಮೇತ್ರಿ(45)ಎಂಬ ರೌಡಿಶೀಟರ್ನ್ನು ಹತ್ಯೆಗೈದು ಎಸ್ಕೇಪ್ ಆಗಿದ್ದರು. ದೇವರ ನಾವದಗಿಯ ನಿವಾಸಿಗಳಾದ ಮಲ್ಲಿಕಾರ್ಜುನ್ ಜನಿವಾರ, ಅನ್ವರ್ ನದಾಫ್ ಹಾಗೂ ಸಂತೋಷ ಕುಮಸಗಿ ಬಂಧಿತ ಆರೋಪಿಗಳು. ಕಬ್ಬು ಕಟಾವು ಮಾಡುವ ಕಡತದಿಂದ ಕೊಚ್ಚಿ, ಕಲ್ಲು ಎತ್ತಿಹಾಕಿ ಜುಲೈ 11ಕ್ಕೆ ಕೊಲೆ ಮಾಡಿದ್ದರು. ಆಲಮೇಲ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.