ಬಾಗಲಕೋಟೆ:
ಕಳೆದ ಲೋಕಸಭಾ ಚುನಾವಣೆಯಲ್ಲಿ ಬಾಗಲಕೋಟ ಮತಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿಯಾಗಿರುವ ಸಚಿವ ಶಿವಾನಂದ ಪಾಟೀಲ ಪುತ್ರಿ ಸಂಯುಕ್ತ ಪಾಟೀಲ ಚುನಾವಣೆ ಮುಗಿದ ಬಳಿಕ ಮೊದಲ ಬಾರಿ ಜಿಲ್ಲೆಯ ಸುಳೇಬಾವಿ ಗ್ರಾಮದಲ್ಲಿರುವ ಶ್ರೀ ಶಾಕಾಂಬರಿ ಕೈಮಗ್ಗ ನೇಕಾರರ ಸಹಕಾರಿ ಸಂಘಕ್ಕೆ ಭೇಟಿ ನೀಡಿ ಕಾರ್ಮಿಕರ ಜೊತೆಗೆ ಚರ್ಚೆ ನಡೆಸಿದ್ದಾರೆ.
ಈ ವೇಳೆ ಅಲ್ಲಿರುವ ಕಾರ್ಮಿಕರು ಅವರೊಂದಿಗೆ ವಿವಿಧ ಸಮಸ್ಯೆಗಳ ಮುಕ್ತವಾಗಿ ಹೇಳಿಕೊಂಡಿದ್ದು ಆ ಸಮಸ್ಯೆಗಳ ಬಗ್ಗೆ ಕೂಡಲೆ ಸರ್ಕಾರದ ಗಮನಕ್ಕೆ ತಂದು ನಿಮ್ಮ ಸಮಸ್ಯೆಗೆ ಪರಿಹಾರ ಒದಗಿಸುವ ಪ್ರಯತ್ನ ಮಾಡುತ್ತವೆ ಎಂದು ತಿಳಿಸಿದ್ದಾರೆ.
ಚುನಾವಣೆಯಲ್ಲಿ ಸೋತರೂ ಕೂಡಾ ನಮ್ಮ ಸಮಸ್ಯೆ ಆಲಿಸಲು ಬಂದಿರುವ ಸಂಯುಕ್ತಾ ಪಾಟೀಲ ಅವರ ನಡೆ ನಮಗೆ ತುಂಭಾ ಖುಷಿ ತಂದಿದೆ ಎಂದು ಅಲ್ಲಿರುವ ಕಾರ್ಮಿಕರು ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ.