ವಿಜಯಪುರ: ನಿಮ್ಮ ರಕ್ಷಣೆ ನಮ್ಮ ಹೊಣೆ ಆಗಿದೆ. ಅದಕ್ಕಾಗಿ ಸವಾರರು ಸಂಚಾರಿ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ಎಸ್ಪಿ ಎಚ್ಡಿ ಆನಂದಕುಮಾರ ಹೇಳಿದರು. ವಿಜಯಪುರದ ಗೋದಾವರಿ ರಸ್ತೆಯಿಂದ ಗಾಂಧಿಚೌಕ್ ವರೆಗೂ ಜಿಲ್ಲಾ ಪೊಲೀಸರು ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ಈ ವೇಳೆ ಎಸ್ಪಿ ಆನಂದಕುಮಾರ ಮಾತನಾಡಿ, ಪ್ರತಿಯೊಬ್ಬರು ಸಂಚಾರಿ ನಿಯಮಗಳನ್ನು ಅರಿತುಕೊಳ್ಳಬೇಕು. ಅಂದಾಗ ಮಾತ್ರ ಅಪಘಾತಗಳು ಕಡಿಮೆ ಆಗುತ್ತವೆ. ಅಲ್ಲದೇ, ಮದ್ಯಪಾನ ಮಾಡಿ ವಾಹನ ಸಂಚಾರ ಮಾಡಬಾರದು. ಇದರಿಂದ ಅಪಘಾತ ಆಗುವ ಸಂಭವವಿರುತ್ತದೆ. ಅದಕ್ಕಾಗಿ ಪ್ರತಿಯೊಬ್ಬರು ಸಂಚಾರಿ ನಿಯಮ ಪಾಲನೆ ಮಾಡುವಂತೆ ಜನತೆಯಲ್ಲಿ ಮನವಿ ಮಾಡಿದರು.
ಈ ವೇಳೆ ಗೋದಾವರಿ ರಸ್ತೆಯಿಂದ ಗಾಂಧಿಚೌಕ್ ವರೆಗೂ ಎಸ್ಪಿ ಆನಂದಕುಮಾರ, ಎಎಸ್ಪಿ ಶಂಕರ ಮಾರಿಹಾಳ, ಡಿವೈಎಸ್ಪಿ ಸಿದ್ಧೇಶ್ವರ ಕೃಷ್ಣಾಪುರ, ಸಿಪಿಐ ಸಿದ್ಧೇಶ್ವರ, ಪಿಎಸ್ಐಗಳಾದ ಜಿಎಸ್ ಉಪ್ಪಾರ, ರಾಯಗೌಡ ಜಾನರ, ಸೀತಾರಾಮ್ ಲಮಾಣಿ, ಯತೀಶ, ಮಲ್ಲಿಕಾರ್ಜುನ ತಳವಾರ, ದೇವರಾಜ್ ಉಳ್ಳಾಗಡ್ಡಿ, ಶರಣಬಸಪ್ಪ ಸಂಗಳದ ಸೇರಿದಂತೆ ಸಿಬ್ಬಂದಿಗಳು ಹೆಲ್ಮೆಟ್ ಧರಿಸಿ ಬೈಕ್ ಚಲಾವಣೆ ಮೂಲಕ ಜನತೆ ಹಾಗೂ ಸವಾರರಲ್ಲಿ ಜಾಗೃತಿ ಮೂಡಿಸಿದರು.