ವಿಜಯಪುರ: ಕಳೆದ 24 ವರ್ಷಗಳಿಂದ ಸ್ಲಮ್ ಹಾಗೂ ಹಿಂದುಳಿದ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ನಗರದಲ್ಲಿ ಶಿಕ್ಷಣ ಕ್ರಾಂತಿ ಮಾಡುವ ಮೂಲಕ ಹೆಸರುವಾಸಿಯಾಗಿರುವ ವಿಜಯಪುರ ನಗರ ಸ್ಟೇಷನ್ ಬ್ಯಾಕ್ ರಸ್ತೆಯಲ್ಲಿರುವ ಲೊಯೋಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಮತ್ತು ಕ್ರಿಸ್ಮಸ್ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಪತ್ರಕರ್ತ ಆಸೀಫ ಬಾಗವಾನ ಮಾತನಾಡಿ, ಲೊಯೋಲ ಶಿಕ್ಷಣ ಸಂಸ್ಥೆಯು ಬಡ ಜನರ ನೋವು ನಲಿವುಗಳನ್ನು ಸ್ಪಂಧಿಸುವ ಜೊತೆಗೆ ಆ ಮಕ್ಕಳಿಗೆ ಮೌಲ್ಯಾದಾರಿತ ಶಿಕ್ಷಣ ನೀಡಿ ಉನ್ನತ ಶಿಕ್ಷಣವನ್ನು ಕೊಡಿಸುವ ಪ್ರಯತ್ನ ಮಾಡುತ್ತಿದ್ದು, ಇಲ್ಲಿ ಕಲಿತ ವಿದ್ಯಾರ್ಥಿಗಳನ್ನು ಡಾಕ್ಟರ ಇಂಜನಿಯರ್ ಪೊಲೀಸ್ ಸೇರಿದಂತೆ ಉನ್ನತ ಮಟ್ಟದ ಹುದ್ದೆಗೆ ಹೋಗಲು ಅಡಿಪಾಯ ಹಾಕುತ್ತಿದ್ದು, ಬಡ ವಿಧ್ಯಾರ್ಥಿಗಳಿಗೆ ಲೊಯೋಲಾ ಶಿಕ್ಷಣ ಸಂಸ್ಥೆಯು ಬೆನ್ನೆಲುಬಾಗಿ ನಿಂತಿದೆ ಹೀಗಾಗಿ ಈ ಸಂಸ್ಥೆಗೆ ನಾವು ಧನ್ಯವಾದಗಳನ್ನು ಸಲ್ಲಿಸುತ್ತೇವೆ ಎಂದು ಹೇಳಿದರು. ಕ್ರಿಸಮಸ್ ಹಬ್ಬದ ಸಂದೇಶವನ್ನು ನೀಡಿದ ಸಿಸ್ಟರ್ ನೀತಾ ಆಳ್ವಾ (ಮುಖ್ಯಸ್ಥರು ಹೊಲಿ ಕ್ರಾಸ್ ಕಾನ್ವೇಂಟ್ ಝಳಕಿ) ಮಾತನಾಡಿ ಕ್ರಿಸಮಸ್ ಎಂದರೆ ಪ್ರೀತಿ ಹಂಚುವುದ ನಂಬಿಕೆ ಉಳಿಸಿಕೊಳುವುದು, ಪ್ರತಿಯೊಬರನ್ನು ಗೌರವಿಸುವುದು ಕ್ರಿಸಮಸ್ ಎಂದರೆ ಹೊಂದಾಣಿಕೆ ಪ್ರತಿಯೊಬ್ಬರಲ್ಲಿ ಕ್ಷಮಾದಾನ, ಶಾಂತಿ, ತಾಳ್ಮೆ, ಸಹನೆ, ಇವುಗಳನ್ನು ಅಳವಡಿಸಿಕೊಳಬೇಕು. ಇನ್ನು ಬುದ್ದಿವಂತ ಮಕ್ಕಳು ನಿದಾನಗತಿಯಲ್ಲಿ ಕಲಿಯುವ ಮಕ್ಕಳಿಗೆ ಕಲಿಕೆಯಲ್ಲಿ ಸಾಹಾಯ ಮಾಡುವುದರ ಅವರನ್ನು ತಮ್ಮೊಟ್ಟಿಗೆ ಕರೆದುಕೊಂಡು ಹೊಗಬೇಕೆಂದು ಕರೆನೀಡಿದರು. ಅಧ್ಯಕ್ಷತೆ ವಹಿಸಿದ್ದ ವಂದನೀಯ ಫಾದರ್ ಪ್ರಾನ್ಸಿಸ್ ಮಿನೆಜಸ್ ಎಸ್ ಜೆ ಮುಖ್ಯಸ್ಥರು ಬಿಜಾಪೂರ ಜೆಸ್ವಿಟ್ ಸಂಸ್ಥೆ ವಿಜಯಪುರ ಮಾತನಾಡಿ, ಕ್ರಿಸಮಸ್ ಹಬ್ಬವು ಪ್ರತಿಯೊಬ್ಬ ಮಕ್ಕಳಲ್ಲಿ ಸಂತೋಷ ಕರುಣೆ ಗೌರವಿಸುವಂತ ಗುಣಗಳು ಪ್ರತಿಯೊಬ್ಬರಲ್ಲಿ ಆ ದೇವರು ದಯಪಾಲಿಸಲಿ ಎಂದು ಹೇಳಿದರು. ಲೊಯೋಲ ಆಂಗ್ಲ ಮಾಧ್ಯಮ ಶಾಲೆಯ ಪ್ರಾಚಾರ್ಯರಾದ ವಂದನಿಯ ಫಾದರ್ ಸಂತೋಷ್ ಫರ್ನಾಂಡಿಸ್ ಎಸ್ ಜೆ ಮಾತನಾಡಿ, ಲೊಯೋಲ ಶಾಲೆಯು ವಿಶೇಷವಾಗಿ ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಮೌಲ್ಯಾಧಿರಿತ ಶಿಕ್ಷಣ ನೀಡುವುದರ ಜೊತೆಗೆ ಪಠ್ಯೇತರ ಚಟವಟಿಕೆಗಳಾದ ಕ್ರೀಡೆ, ಸಂಸ್ಕೃತಿ ಚಟವಟಿಕೆಗಳು, ವಿದ್ಯಾರ್ಥಿಗಳಲ್ಲಿ ಸೂಕ್ತವಾಗಿ ಅಡಗಿರುವ ಪ್ರತಿಭೆಗಳನ್ನು ಹೊರತರಲು ಪ್ರಬಂಧ ಸ್ಪರ್ಧೆ ಕಲೆ, ಚಿತ್ರಕಲೆ, ವಿಜ್ಞಾನ ವಸ್ತು ಪ್ರದರ್ಶನ ಇನಿತರ ಸ್ಪರ್ಧೆಗಳನ್ನು ಏರ್ಪಡಿಸಿ ವಿದ್ಯಾರ್ಥಿಗಳ ಸರ್ವೋತೊಮುಖ ಬೆಳವಣಿಗೆಗೆ ಈ ಶಾಲೆ ಶ್ರಮವಹಿಸುತ್ತಿದೆ ಎಂದು ಹೇಳಿದರು. ಇನ್ನು ಕಾರ್ಯಕ್ರಮಉದ್ಘಾಟನೆ ನಂತರ ಶಾಲಾ ಮಕ್ಕಳಿಂದ ಕೆಕ ಕತ್ತರಿಸುವ ಮೂಲಕ ಕ್ರಿಸ್ಮಸ್ ಹಬ್ಬದ ಶುಭಕೊರಲಾಯಿತು. ಈ ಸಂದರ್ಭದಲ್ಲಿ ಚಿದಾನಂದ ಬಿರಾದಾರ, ಶ್ರೀಮತಿ ಗಂಗಾ ನಾಡಗೌಡ, ಶಾಲಾ ನಾಯಕ ನಾಯಕಿಯರಾದ ಕುಮಾರ ಹನೋಕ್ ಯರಗುಂಟಿ, ಕುಮಾರಿ ಜ್ಯೋತಿ ತಳವಾರ ಉಪಸ್ಥಿತರಿದ್ದರು. ಶಾಲಾ ವಾರ್ಷಿಕ ವರದಿಯನ್ನು ಬಾಪೂರಾಯ ಮೆಡೆಗಾರವರು ವಾಚನ ಮಾಡಿದರು. ನಿರೂಪಣೆಯನ್ನು ಕುಮಾರಿ ಸಾವಿತ್ರಿ ತಳವಾರ ಶ್ರೀಮತಿ ಸುಕನ್ಯಾ ಯರನಾಳರವರು ನಡೆಸಿಕೊಟ್ಟರು. ಸ್ವಾಗತಕೊರಿದವರು ಅವಿನಾಶ ನಂದ್ಯಾಳರವರು. ವಂದನೆಗಳನ್ನು ಸಲ್ಲಿಸಿದವರು ಶ್ರೀಮತಿ ಮೊಶಿನಾ ಲಾತೂರಿ ಉಪಸ್ಥಿತರಿದ್ದರು.