![](https://karnataka1news.com/wp-content/uploads/2023/12/IMG_20221212_183635-4.jpg)
ವಿಜಯಪುರ: ತೊಗಟೆ ಸುಲಿದ ಶ್ರೀಗಂಧದ ತುಂಡುಗಳನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದುದನ್ನು ಪತ್ತೆ ಮಾಡಿರುವ ಪೊಲೀಸರು, 50 ಸಾವಿರ ರೂ. ವೌಲ್ಯದ ಶ್ರೀಗಂಧ ವಶಪಡಿಸಿಕೊಮಡಿದ್ದಾರೆ. ವಿಜಯಪುರ ತಾಲೂಕಿನ ಮಿಂಚನಾಳದ ಸತೀಶ ಭೀಮಪ್ಪ ಕಾಂಬಳೆ ಹಾಗೂ ಇಂಡಿ ತಾಲೂಕಿನ ಅಥರ್ಗಾ ಗ್ರಾಮದ ಪ್ರಕಾಶ ಯಶವಂತರಾಯ ಸಿಂದಗಿ ಆರೋಪಿಗಳು. ಇವರು ಸರಕಾರದ ಪರವಾನಗಿಯಿಲ್ಲದೇ, ಶ್ರೀಗಂಧ ಮರದ ತೊಗಟೆ ಸುಲಿದ ತುಂಡುಗಳನ್ನು ಚೀಲದಲ್ಲಿ ಹಾಕಿಕೊಂಡು , ಬೈಕ್ ಮೇಲೆ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಆರೋಪಿಗಳ ವಿರುದ್ಧ ಆಲಮೇಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
![](https://karnataka1news.com/wp-content/uploads/2023/12/IMG-20231227-WA0126-1-1024x1024.jpg)