ವಿಜಯಪುರ: ಭೀಮಾತೀರದಲ್ಲಿ ಕಳ್ಳರು ಮೂರು ಮನೆಗಳ ಸರಣಿ ಕಳ್ಳತನಗೈದು ಪರಾರಿಯಾಗಿರುವ ಘಟನೆ ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಉಮರಾಣಿ ಗ್ರಾಮದಲ್ಲಿ ನಡೆದಿದೆ.
ಸದಾಶಿವ ಕೋಳಿ, ಜಗದೇವ ಕೋಳಿ, ಮಲ್ಲಯ್ಯ ಎಂಬುವವರಿಗೆ ಸೇರಿದ ಮನೆಗಳಲ್ಲಿ ಕಳ್ಳತನ ಮಾಡಲಾಗಿದೆ. ಇನ್ನು ಮನೆ ಬೀಗ ಹಾಕಿ ಮನೆಯವರು ಬೇರೆಡೆ ತೆರಳಿದ್ದ ವೇಳೆ ಕದೀಮರು 40 ಗ್ರಾಂ ಚಿನ್ನಾಭರಣ, ಐವತ್ತು ಸಾವಿರ ನಗದು ಕದ್ದು ಪರಾರಿಯಾಗಿದ್ದಾರೆ. ಕದೀಮರ ಓಡಾಟ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.