ವಿಜಯಪುರ: ಮಾಜಿ ಸಿಎಂ ಸಿದ್ದರಾಮಯ್ಯ ಗೆಲುವಿಗೆ ಬಾಲಕಿಯೋರ್ವಳು
5000 ಸಾವಿರ ಹಣ ನೀಡಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಶನಿವಾರ ನಡೆದ ಪ್ರಜಾಧ್ವನಿ ಬಸ್ ಯಾತ್ರೆ ಸಮಾವೇಶದಲ್ಲಿ ನಡೆದಿದೆ. ಜೀಯಾ ರಫೀಕ್ ಮಣೂರು ಹಣ ನೀಡಿದ ಬಾಲಕಿ. ಇನ್ನೂ ಸಿದ್ದರಾಮಯ್ಯ ಗೆಲುವಿಗೆ ಜೀಯಾ ಹಣ ಕೂಡಿಟ್ಟಿದ್ದಳು. ಇನ್ನು ಸಿಂದಗಿಗೆ ಸಿದ್ದರಾಮಯ್ಯ ಆಗಮಿಸಿದ ವೇಳೆ ಹಣ ನೀಡಿದ್ದಾಳೆ. ಅದಕ್ಕಾಗಿ ನಿನ್ನ ವಿದ್ಯಾಭ್ಯಾಸಕ್ಕೆ ಹಣ ಇಟ್ಕೊಳ್ಳಮ್ಮ ಎಂದು ಮರಳಿ ಬಾಲಕಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಹಣ ನೀಡಿದರು.
ಸಿದ್ದು ಗೆಲುವಿಗೆ ಹಣ ನೀಡಿದ ಬಾಲಕಿ
![](https://karnataka1news.com/wp-content/uploads/2023/02/IMG_20230211_155522-860x484.jpg)