ಚಿತ್ರದುರ್ಗ: ರಿಮೋಟ್(Remote) ವಿಚಾರಕ್ಕೆ ಮಕ್ಕಳಿಬ್ಬರ ನಡುವೆ ಜಗಳ ಹಿನ್ನೆಲೆ ತಂದೆಯಿಂದ ಮಗನ ಹತ್ಯೆಗೈದಿರುವ(Murder) ಘಟನೆ ಚಿತ್ರದುರ್ಗದ ಮೊಳಕಾಲ್ಮೂರು NMS ಬಡಾವಣೆಯಲ್ಲಿ ನಡೆದಿದೆ. ಚಂದ್ರಶೇಖರ್ (16) ಕೊಲೆಯಾದ ಬಾಲಕ. ಲಕ್ಷ್ಮಣಬಾಬು ಕೊಲೆಗೈದಿರುವ ತಂದೆ. ಅಣ್ಣ ತಮ್ಮದಿಂದು ರಿಮೋಟ್ ಗಾಗಿ ಕಚ್ಚಾಡುತ್ತಿದ್ದರು. ಈ ವೇಳೆ ಕತ್ತರಿಯಿಂದ ಮಗನಿಗೆ ತಂದೆ ಹೊಡೆದಿದ್ದಾನೆ. ಇದರಿಂದ ಕಿವಿ ಭಾಗದಲ್ಲಿ ತೀವ್ರ ರಕ್ತಸ್ರಾವವಾಗಿ ಬಾಲಕ ಅಸುನೀಗಿದ್ದಾನೆ. ಸ್ಥಳಕ್ಕೆ ಪಿಎಸ್ಐ ಪಾಂಡುರಂಗ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೊಳಕಾಲ್ಮೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.