ಬೆಳಗಾವಿ: ಸವದತ್ತಿ ಯಲ್ಲಮ್ಮ ಯಾತ್ರಾರ್ಥಿಗಳು ಪ್ರಯಾಣಿಸುತ್ತಿದ್ದ ವಾಹನ ಅಪಘಾತವಾಗಿ ಆರು ಜನರು ಅಸುನೀಗಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹುಲಕುಂದ ಗ್ರಾಮದಿಂದ ಸವದತ್ತಿಗೆ ಹೋಗುವಾಗ ನಡೆದಿದೆ. ವಿಠ್ಠಲ, ರುಕ್ಮಿಣಿ ದೇವಸ್ಥಾನದ ಆಲದ ಮರಕ್ಕೆ ಮಹೇಂದ್ರ ಗೂಡ್ಸ್ ವಾಹನ ಡಿಕ್ಕಿಯಾಗಿ ಹನಮ್ಮವ್ವ(24), ದೀಪಾ (31), ಸವಿತಾ(12), ಸುಪ್ರೀತಾ(11), ಮಾರುತಿ(42), ಇಂದ್ರವ್ವಾ(24) ಮೃತಪಟ್ಟಿದ್ದಾರೆ.
ಇನ್ನು ಗಾಯಾಳುಗಳನ್ನು ಗೋಕಾಕ್ ಸೇರಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನಾ ಸ್ಥಳಕ್ಕೆ ಬೆಳಗಾವಿ ಎಸ್ಪಿ ಸಂಜೀವ ಪಾಟೀಲ್ ಭೇಟಿ, ಪರಿಶೀಲನೆ ನಡೆಸಿದರು.
ಕುಂದಾನಗರಿಯಲ್ಲಿ ಭೀಕರ ರಸ್ತೆ ಅಪಘಾತ.. ಆರು ಜನರ ಸಾವು…
![](https://karnataka1news.com/wp-content/uploads/2023/01/IMG_20221212_183710.jpg)