ವಿಜಯಪುರ: ಅಕ್ರಮವಾಗಿ ಗೋಡೌನಲ್ಲಿ ಸಂಗ್ರಹಿಸಿಟ್ಟಿದ ಪಡಿತರ ಅಕ್ಕಿಯನ್ನು ಸಾಗಾಟ ವೇಳೆ ಪೊಲೀಸರು ದಾಳಿಗೈದು ಲಕ್ಷಾಂತರ ಮೌಲ್ಯದ ಅಕ್ಕಿ ಜಪ್ತಿಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಝಳಕಿ ಗ್ರಾಮದ ರಸ್ತೆಯಲ್ಲಿ ನಡೆದಿದೆ. ಸಂಜಯ ಸಲಗರ, ಸಾಧಿಕ್ ಕಲಬುರಗಿ, ವೈಭವ ಮಾನೆ ಬಂಧಿತ ಆರೋಪಿಗಳು. ಸೊಲ್ಲಾಪುರದ ಗೋಡೌನನಿಂದ ಪಡಿತರ ಅಕ್ಕಿಯನ್ನು ಲಾರಿಯಲ್ಲಿ ತುಂಬಿಕೊಂಡು ಹೋಗುತ್ತಿದ್ದಾಗ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿಗೈದು 5, 72,470 ಮೌಲ್ಯದ 24890 ಕೆಜಿ ಅಕ್ಕಿ ಹಾಗೂ ಎರಡು ಲಕ್ಷದ ಲಾರಿ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಝಳಕಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
![](https://karnataka1news.com/wp-content/uploads/2023/09/IMG-20230928-WA0025-1024x578.jpg)