ವಿಜಯಪುರ: ಹಣಕ್ಕಾಗಿ ತಂದೆಯನ್ನೆ ಮಗ ಹತ್ಯೆಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ಪಟ್ಟಣದಲ್ಲಿ ನಡೆದಿದೆ.
ಶಿವಾನಂದ ಕೋಟ್ಯಾಳ ಹತ್ಯೆಯಾಗಿರುವ ತಂದೆ. ಇನ್ನೂ ಮಗ ಮುತ್ತುರಾಜ ಕೊಟ್ಯಾಳ್, ಮಹಾದೇವಿ ಕೋಟ್ಯಾಳ, ಶ್ರೀಧರ್ ಹುಲೆಪ್ಪಗೋಳ ಹತ್ಯೆಗೈದವರು. ಇನ್ನೂ ಜಮೀನ ಮೇಲೆ ಬ್ಯಾಂಕ್ನಲ್ಲಿ ಸಾಲ ತೆಗೆಯಲು ಸಹಿ ಮಾಡು ಎಂದು ಶಿವಾನಂದಗೆ ಒತ್ತಾಯಿಸಿದ್ದಾರೆ. ಆದ್ರೇ, ಸಹಿ ಮಾಡದಕ್ಕೆ ಉರಿಸು ಗಟ್ಟಿಸಿ ಹತ್ಯೆಗೈದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಈ ಕುರಿತು ಬಬಲೇಶ್ವರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.