ವಿಜಯಪುರ: ಪುತ್ರನ್ನು ತಂದೆಯೇ ಸಲಕಿಯಿಂದ ಹೊಡೆದು ಹತ್ಯೆಗೈದಿರುವ ಘಟನೆ ವಿಜಯಪುರ ತಾಲ್ಲೂಕಿನ ನಾಗಠಾಣ ಗ್ರಾಮದಲ್ಲಿ ನಡೆದಿದೆ. 38 ವರ್ಷದ ಮುತ್ತಪ್ಪ ಮಸಳಿ ಹತ್ಯೆಯಾಗಿರುವ ದುರ್ದೈವಿ. ಇನ್ನು ತಂದೆ ಬಸಪ್ಪ ಮಸಳಿ ಹತ್ಯೆಗೈದಿರುವ ಆರೋಪಿ. ಮದ್ಯ ಬಿಡುವಂತೆ ಮುತ್ತಪ್ಪಗೆ ತಂದೆ ಬಸಪ್ಪ ಬುದ್ಧಿವಾದ ಹೇಳಿದ್ದಾನೆ. ಆದ್ರೇ ಮಾತು ಕೇಳದೇ ಜಮೀನಿನಲ್ಲಿರುವ ವಸ್ತುಗಳನ್ನು ಮಾರಾಟ ಮಾಡಿ ಮದ್ಯ ಸೇವೆ ಮಾಡಿದ್ದಾನೆ. ಅದಕ್ಕಾಗಿ ಮಗನನ್ನು ತಂದೆ ಹತ್ಯೆ ಮಾಡಿದ್ದಾನೆ. ವಿಜಯಪುರ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.