ವಿಜಯಪುರ: ಸಚಿವರ ಸ್ವಾಗತಿಸುವ ಕಟೌಟ್ ಬ್ಯಾನರ್ನ್ನು ಕಿಡಿಗೇಡಿಗಳು ಹರಿದು ಹಾಕಿರುವ ಘಟನೆ
ವಿಜಯಪುರ ಜಿಲ್ಲೆಯ ಬಸವನಬಾಗೇಬಾಡಿ ಪಟ್ಟಣದಲ್ಲಿ ನಡೆದಿದೆ. ಸಚಿವ ಶಿವಾನಂದ ಪಾಟೀಲ್ ಬ್ಯಾನರ್ ಕಟೌಟ್ನ್ನು ಕಿಡಿಗೇಡಿಗಳು ಹರಿದು ಹಾಕಿದ್ದಾರೆ. ಇನ್ನೂ ಸಚಿವರಾದ ನಂತರ ಇದೇ ಮೊದಲನೇ ಬಾರಿಗೆ ಸ್ವ ಕ್ಷೇತ್ರಕ್ಕೆ ಆಗಮನ ಹಿನ್ನಲೆ ಅಭಿಮಾನಿಗಳು ಸ್ವಾಗತ ಕೋರಲು ಕಟೌಟ್ ಕಟ್ಟಿದ್ದಾರೆ. ಸಚಿವ ಶಿವಾನಂದ ಪಾಟೀಲ್ ಕಟೌಟ್ ಮುಖದಿಂದ ಕೆಳಗಿನ ವರೆಗೆ ಮಧ್ಯದ ವರೆಗೂ ಕಟೌಟ್ ಹರಿದು ಹಾಕಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಬಸವನಬಾಗೇಬಾಡಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.