ವಿಜಯಪುರ: ಅಂತರಾಷ್ಟ್ರೀಯ ಮಹಿಳಾ ಕ್ರಿಕೆಟ್ರ ರಾಜೇಶ್ವರಿ ಗಾಯಕವಾಡ್ ಮಾಲ್ ನಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ. ಆದ್ರೇ, ಯಾವುದೇ ಪ್ರಕರಣ ದಾಖಲು ಆಗಿಲ್ಲ ಎಂದು ವಿಜಯಪುರದಲ್ಲಿ ಗುರುವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಎಸ್ಪಿ ಎಚ್ಡಿ ಆನಂದಕುಮಾರ ಪ್ರತಿಕ್ರಿಯೆ ನೀಡಿದರು.
ರಾಜೇಶ್ವರಿ ವಿರುದ್ಧ ಯಾವುದೇ ಠಾಣೆಯಲ್ಲಿ ದೂರು ಪ್ರತಿದೂರು ಯಾವುದು ದಾಖಲಾಗಿಲ್ಲ. ಈ ರೀತಿಯ ಸಣ್ಣ ಪುಟ್ಟ ಘಟನೆಗಳು ನಡೆಯುತ್ತವೆ.
ಆದರೆ ಇವರು ರಾಷ್ಟ್ರೀಯ ಆಟಗಾರ ಎಂಬ ಕಾರಣಕ್ಕೆ ಸ್ವಲ್ಪ ಸುದ್ದಿಯಾಗಿದೆ. ಒಂದು ವೇಳೆ ದೂರು ದಾಖಲಾದರೆ ನಮ್ಮ ದೇಶದ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವದು. ವಿಐಪಿ ಅಥವಾ ಜನಸಾಮಾನ್ಯರಿಗೂ ಒಂದೆ ಕಾನೂನು ಇದೆ. ದೂರು ದಾಖಲಾದ್ರೆ ಕ್ರಮ ಜರುಗಿಸಲಾಗುವುದು ಎಂದರು.