ವಿಜಯಪುರ: ಮಹಿಳೆ, ಅಪ್ರಾಪ್ತ ಬಾಲಕಿಯರ ಮೇಲೆ ದಿನದಿಂದ ದಿನಕ್ಕೆ ಅತ್ಯಾಚರ, ವರದಕ್ಷಿಣೆ ಕಿರುಕುಳ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇಂಥ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.
ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಜಿಲ್ಲಾಧ್ಯಕ್ಷ ಭಾರತಿ ವಾಲಿ ಮಾತನಾಡಿ, ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಜಾರಿ ಮಾಡಲು ಪಣ ತೊಟ್ಟಿರುವ ಸಂಘಟನೆಯು ಎಲ್ಲ ವರ್ಗದ ಮಳೆಯರ ಸವಾರ್ಂಗೀಣ ಅಭಿವೃದ್ಧಿಗಾಗಿ ಸ್ರಮಿಸುತ್ತಿದೆ. ಎಲ್ಲ ಮಹಿಳೆಯರು ಸಮಾನರು, ವಿಶ್ವದಲ್ಲಡೆ ಅವರು ಒಂದಿಲ್ಲೊಂದು ಬಗೆಯ ತುಳಿತಕ್ಕೆ ಬಲಿಯಾಗುತ್ತಿದ್ದಾರೆ. ಮಹಿಳೆಯರ ಮೇಲಿನ ದೌರ್ಜನ್ಯಗಳು ನಿಲ್ಲಬೇಕು. ಈ ನಿಟ್ಟಿನಲ್ಲಿ ಕಾನೂನುಗಳನ್ನು ಬಲಗೊಳಿಸಬೇಕು ಎಂದು ಒತ್ತಾಯಿಸಿದರು.
ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಪ್ರಧಾನ ಕಾರ್ಯದರ್ಶಿ ಅನುಸೂಯಾ ಹಜೇರಿ ಮಾತನಾಡಿದರು.
ಸಾಹೇಬಿ ಶೇಖ, ರಾಜಮಾ ನದಾಫ್, ಸುಮಿತ್ರಾ ಗೋಣಸಗಿ, ಮಾಬುಬಿ ಪಾಂಡುಗೋಳ, ಸೋನುಬಾಯಿ ಬ್ಯಾಲಿ, ಸಂಗೀತಾ ಬೆಳನ್ನವರ, ಗಂಗೂಬಾಯಿ ಚಿಣಗಿ, ಮಂಜುಳಾ ಹಜೇರಿ, ವಿಜಯಲಕ್ಷ್ಮೀ ಹಜೇರಿ, ಶಕೀಲಾಬಾನು ಅಖರಖೇಡ ಇದ್ದರು.