ಬೀದರ್: ಕಲ್ಲು ತುಂಬಿದ ಲಾರಿ ಹಾಯ್ದು ಸರ್ಕಾರಿ ಶಾಲಾ ವಿದ್ಯಾರ್ಥಿ ಅಸುನೀಗಿರುವ ಘಟನೆ ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ನಿರ್ಣಾ ಗ್ರಾಮದಲ್ಲಿ ನಡೆದಿದೆ.
ವಿನೋದ ಸುಭಾಷ ಅತಿವಾಳ ಮೃತಪಟ್ಟಿರುವ ದುರ್ದೈವಿ. ಮಧ್ಯಾಹ್ನ ಶಾಲಾ ವಿರಾಮದ ವೇಳೆ ಊಟಕ್ಕೆ ಅಂತ ಶಾಲೆಯಿಂದ ರಸ್ತೆಗೆ ಬಂದಿದ್ದನು. ಈ ವೇಳೆಯಲ್ಲಿ ಹಿಂಬದಿಯಿಂದ ಬಂದು ಲಾರಿ ಹಾಯ್ದು ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ. ಲಾರಿ ಚಾಲಕ ಪರಾರಿಯಾಗಿದ್ದಾನೆ. ಈ ಕುರಿತು ಮನ್ನಾಏಖ್ಖೇಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.