ವಿಜಯಪುರ: ಬೇಸಿಗೆ ಹಿನ್ನೆಲೆ ಮನೆಯವರು ಮನೆಯ ಮಾಳಿಗೆಯ ಮೇಲೆ ಮಲಗಿದ್ದ ವೇಳೆ ಕಳ್ಳರು ಸರಣಿ ಮನೆಗಳ್ಳತನಗೈದು ಚಿನ್ನ, ನಗದು, ಟಿವಿ ದೋಚಿಕೊಂಡು ಪರಾರಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಬರಡೋಲ ಗ್ರಾಮದಲ್ಲಿ ನಡೆದಿದೆ. ನಾಗಪ್ಪ ಕಾಪ್ಸೆ ಎಂಬುವರ ಮನೆಯಲ್ಲಿದ್ದ 1.5 ಗ್ರಾಂ ಚಿನ್ನಾಭರಣ ಹಾಗೂ 35 ಸಾವಿರ ನಗದು ಕಳ್ಳತನಗೈದು ಕಳ್ಳರು ಪರಾರಿಯಾಗಿದ್ದಾರೆ. ಎಲ್ಲವ್ವ ಕಟ್ಟಿಮನಿ ಮನೆಯಿಂದ ಹೋಮ ಥಿಯೇಟರ್ ಮತ್ತು ಟಿವಿಯನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಚಡಚಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.