![](https://karnataka1news.com/wp-content/uploads/2024/02/IMG-20240204-WA0111-1024x769.jpg)
ವಿಜಯಪುರ: ಸಾರ್ವಜನಿಕ ಪ್ರದೇಶಗಳು ನಮ್ಮ ಆಸ್ತಿ ಅವುಗಳನ್ನ ಸ್ವಚ್ಛವಾಗಿ ಕಾಪಾಡಿಕೊಂಡು ಹೋಗುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಎಬಿವಿಪಿಯ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಮಾತನಾಡಿದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿಜಯಪುರ ವತಿಯಿಂದ ಎಸ್ ಎಫ್ ಡಿ ಆಯೋಜಿಸಿರುವ “ಸಂಡೇ ಫಾರ್ ಸೊಸೈಟಿ” ಎನ್ನುವ ಅಭಿಯಾನವನ್ನು ವಿಜಯಪುರ ನಗರದ ಗಾಂಧಿ ವೃತ್ತದಲ್ಲಿ ಚಾಲನೆ ನೀಡಿ ಮಾತನಾಡಿದರು. ವಿಜಯಪುರ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಹಾಗೂ ಪರಿಸರ ರಕ್ಷಣೆಗೆ ಸಂಬಂಧಿಸಿದ ಗೋಡೆ ಬರಹವನ್ನು ಬರೆಯಲಾಯಿತು. ವಿದ್ಯಾರ್ಥಿಗಳು ತಮ್ಮ ರಜೆ ದಿನವಾದ ರವಿವಾರ ಸ್ವಚ್ಛತೆಗೆ ಆದ್ಯತೆಯನ್ನು ಕೊಡುವ ದೃಷ್ಟಿಯಲ್ಲಿ ಪ್ರತಿ ರವಿವಾರ ಒಂದು ಸಾರ್ವಜನಿಕ ಪ್ರದೇಶವನ್ನ ಆಯ್ಕೆ ಮಾಡಿಕೊಂಡು ಅಲ್ಲಿ ಸ್ವಚ್ಛತೆಯನ್ನ ಮಾಡುವಂತಹ ಈ ಅಭಿಯಾನವಾಗಿದೆ, ಈ ಅಭಿಯಾನದಲ್ಲಿ ನಗರದ ಬೇರೆ ಬೇರೆ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದರು. ಎಬಿವಿಪಿಯ ವಿಭಾಗ ಸಹ ಪ್ರಮುಖರಾದ ಡಾ. ಅಮಿತ ಕುಮಾರ ಬಿರಾದಾರ ಮಾತನಾಡಿ ಪರಿಸರ ಜನರಿಗಾಗಿ ಹಲವಾರು ಕೊಡುಗೆಗಳನ್ನು ನಿಸರ್ಗ ನೀಡುತ್ತಾ ಬಂದಿದೆ ಆದರೆ ನಾವುಗಳು ನಿಸರ್ಗಕ್ಕೆ ಸ್ವಚ್ಛತೆ ಮಾಡುವುದು ಸಸಿಗಳನ್ನು ನೋಡುವುದು ಈ ಮೂಲಕ ಜಾಗೃತರಾಗಿ ಪರಿಸರದ ರಕ್ಷಣೆಯನ್ನು ಜಲದ ರಕ್ಷಣೆಯನ್ನು ಮಾಡುವಂತಹ ಅವಶ್ಯಕತೆ ಮತ್ತು ಅನಿವಾರ್ಯತೆ ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿ ಆಗಿದೆ ಎಂದರು. ಎಬಿವಿಪಿಯ ಜಿಲ್ಲಾ ಪ್ರಮುಖರಾದ ಡಾ. ಎಂ ಎಸ್ ಬಿರಾದಾರ ಎಸ್ ಎಫ್ ಡಿ ಪ್ರಾಂತ ಸಂಯೋಜಕರಾದ ಮಲ್ಲಿಕಾರ್ಜುನ ಮಾಳಿ, ಸುಮಾ ಬೋಳರೆಡ್ಡಿ, ಜಿಲ್ಲಾ ಸಂಚಾಲಕರಾದ ಮಂಜುನಾಥ ಹಳ್ಳಿ, ಹರ್ಷ ನಾಯಕ, ಸಿದ್ದು ಪತ್ತಾರ, ಕವಿತಾ ಬಿರಾದಾರ, ಶಿವನಗೌಡ ಬಿರಾದಾರ, ಆಸಂಗಿ,ಅಮಿತ ಬಣಗಾರ, ಶ್ರವಣ, ಅಭಿಷೇಕ ಬಿರಾದಾರ, ಸಂದೀಪ ಅರಲಗುಂಡಿ, ಮಹೇಶ, ಶಿಲ್ಪಾ, ಸ್ನೇಹಾ ಚವಾಣ, ಪೂಜಾ ವೀರಶೆಟ್ಟಿ, ಪ್ರವೀಣ ಬಿರಾದಾರ, ರಮೇಶ ಡಾಂಗೆ, ಚೇತನ ಕೋರ್ವಾರ ಇತರರು ಇದ್ದರು.
![](https://karnataka1news.com/wp-content/uploads/2023/12/IMG-20231227-WA0126-1-1024x1024.jpg)