ವಿಜಯಪುರ: ಆಲಮಟ್ಟಿ ಜಲಾಶಯ ವ್ಯಾಪ್ತಿಗೆ ಬುರ್ಖಾಧಾರಿ ಮಂಗಳಮುಖಿ ಯತ್ನಿಸಿರುವ ಘಟನೆ ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯದಲ್ಲಿ ನಡೆದಿದೆ.
ಆಲಮಟ್ಟಿ ಜಲಾಶಯಕ್ಕೆ ಹಾಸನ ಮೂಲದ ಕಿಶೋರ್ ಒಳನುಗ್ಗಲು ಯತ್ನಿಸಿದ್ದಾನೆ. ಬುರ್ಖಾದೊಳಗೆ ಇರುವುದು ಮಹಿಳೆಯಲ್ಲ ಮಂಗಳಮುಖಿ ಎಂದು ಪೊಲೀಸ ತನಿಖೆ ವೇಳೆಯಲ್ಲಿ ಬಹಿರಂಗವಾಗಿದೆ. ಮನೆಯಲ್ಲಿ ಮದುವೆ ಮಾಡುತ್ತಿರುವ ಕಾರಣ ಜಗಳ ಮಾಡಿಕೊಂಡು ಓಡಿ ಬಂದಿದ್ದಾಳೆ. ಮಂಗಳಮುಖಿಯನ್ನು ಪೊಲೀಸ ವಶಕ್ಕೆ ಪಡೆದುಕೊಂಡಿದ್ದಾರೆ. ಆಲಮಟ್ಟಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.