ಉತ್ತರ ಕನ್ನಡ: ಕಾರಿನ ಹಿಂಬದಿಗೆ ಬೈಕ್ ಡಿಕ್ಕಿಯಾಗಿರುವ ಪರಿಣಾಮ ಬ್ಯಾಂಕ್ ಮ್ಯಾನೇಜರ್ ಮೃತಪಟ್ಟಿರುವ ಘಟನೆ ಕಾರವಾರ ನಗರದ ಆರ್ಟಿಓ ಕಚೇರಿಯ ಬಳಿ ನಡೆದಿದೆ.
ಕಾರವಾರ ಅರ್ಬನ್ ಬ್ಯಾಂಕ್ ಮ್ಯಾನೇಜರ್ ಗುರುದಾಸ್ ಬಾಂದೇಕರ್ (55) ಮೃತಪಟ್ಟಿರುವ ದುರ್ದೈವಿ. ಇನ್ನು ಕಾರಿನ ಹಿಂಬದಿಗೆ ಬೈಕ್ ಡಿಕ್ಕಿಯಾಗಿದೆ. ಇನ್ನು ಆರ್ಟಿಓ ಕಚೇರಿಯ ಬಳಿ ನಡೆದ ಈ ಅಪಘಾತದಲ್ಲಿ ಗುರುದಾಸ್ ತಲೆಗೆ ಭಾರೀ ಹೊಡೆತ ಬಿದ್ದಿದ್ದು, ರಸ್ತೆಯೆಲ್ಲ ರಕ್ತಮಯವಾಗಿದೆ. ತಕ್ಷಣವೇ ಕಾರಿನ ಚಾಲಕ ಗಾಯಗೊಂಡ ಗುರುದಾಸ್ನ್ನು ತಮ್ಮದೇ ಕಾರಿನಲ್ಲಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದು, ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದರು. ಕಾರವಾರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
![](https://karnataka1news.com/wp-content/uploads/2023/08/IMG-20230821-WA0093-458x1024.jpg)