ವಿಜಯಪುರ: ಸಿಗರೆಟ್ ಬೆಂಕಿ ಯಡವಟ್ಟನಿಂದ ರಸ್ತೆಯ ಬದಿಯಲ್ಲಿರುವ ಒಣಗಿದ ಕಸಕ್ಕೆ ಸಿಗರೆಟ್ ಬೆಂಕಿ ತಗುಲಿ ಕಾರು ಭಸ್ಮವಾಗಿರುವ ಘಟನೆ ವಿಜಯಪುರ ನಗರದ ಬಬಲೇಶ್ವರ ರಸ್ತೆಯಲ್ಲಿ ನಡೆದಿದೆ. ಕಿಡಿಗೇಡಿಗಳು ಸಿಗರೆಟ್ ಸೇದಿ ಸಿಗರೆಟ್ ಎಸೆದಿದ್ದಾರೆ. ಸಿಗರೆಟ್ ಬೆಂಕಿ ಆರಿಸದೇ ಒಣಗಿದ ಕಸದಲ್ಲಿ ಎಸೆದು ಹೋಗಿದ್ದಾರೆ. ಇದರಿಂಸ ಕಸಕ್ಕೆ ಬೆಂಕಿ ತಗುಲಿದೆ. ಇದರಿಂದ ಕಾರು ಸಂಪೂರ್ಣವಾಗಿ ಕರಕಲ ಆಗಿದೆ. ಕಾರು ಯಾರದು ಎಂದು ಮಾಹಿತಿ ಲಭ್ಯವಾಗಿಲ್ಲ. ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿಗಳು ಭೇಟಿ ನೀಡಿ ಬೆಂಕಿ ನಂದಿಸಿದರು. ಗಾಂಧಿಚೌಕ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.