ವಿಜಯಪುರ: ಫರ್ನಿಚರ್ ಅಂಗಡಿ ಮಾಲೀಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಮಂಗಳವಾರ ನಡೆದಿದೆ. ದಾನೇಶ್ವರಿ ಸ್ಟೀಲ್ ಫರ್ನಿಚರ್ ಮಾಲೀಕ ಸಂಗಮೇಶ ಚನ್ನಪ್ಪ ಇವಣಿ (35) ನೇಣಿಗೆ ಶರಣಾಗಿದ್ದಾನೆ. ಫರ್ನಿಚರ್ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಆದ್ರೇ, ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಸಿಂದಗಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.