ವಿಜಯಪುರ: ನನ್ನನ್ನು ಸೋಲಿಸಲು ನಮ್ಮ ಪಕ್ಷದವರು ಕುತಂತ್ರ ಮಾಡುತ್ತಿದ್ದಾರೆ ಎಂದು ಶಾಸಕ ಶಿವಾನಂದ ಪಾಟೀಲ ಹೊಸ ಬಾಂಬ್ ಸಿಡಿಸಿದ್ದಾರೆ. ವಿಜಯಪುರ ನಗರದಲ್ಲಿ ಶುಕ್ರವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನನ್ನು ಸೋಲಿಸಲು ವಿಜಯಪುರ ನಗರದಲ್ಲಿ ಪ್ಲ್ಯಾನ್ ಮಾಡಲಾಗಿದೆ. ಬಸವನಬಾಗೇಬಾಡಿ ಮತಕ್ಷೇತ್ರದಲ್ಲಿ ವಿವಿಧ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕೆ ನಿಲ್ಲಿಸಲಾಗಿದೆ. ಆದ್ರೇ, ನನ್ನ ಮತಕ್ಷೇತ್ರದ ಜನತೆ ಕೈ ಬಿಡಲ್ಲ ಎಂದು ನನಗೆ ನಂಬಿಕೆ ಇದೆ ಎಂದರು. ಅಲ್ಲದೇ, ಬಸವನಬಾಗೇಬಾಡಿ ಮತಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ಮತಗಳನ್ನು ಒಡೆಯಲು ಎಐಎಂಐಎಂ ಅಭ್ಯರ್ಥಿ ಅಲ್ಲಾಭಕ್ಷ ಬಿಜಾಪುರನ್ನು ನಿಲ್ಲಿಸಿದ್ದಾರೆ. ಇದರ ಹಿಂದೆ ಕೂಡ ನಮ್ಮವರೇ ಕೈವಾಡ ಇದೆ. ಇನ್ನೂ ವಿಜಯಪುರ ಮೌಲಾನಾ ಇದಕ್ಕೆ ಕಾರಣ. ಬರುವ ದಿನಗಳಲ್ಲಿ ಎಲ್ಲವನ್ನೂ ಬಹಿರಂಗ ಮಾಡುತ್ತೇನೆ ಎಂದು ಖಡಕ್ ಸಂದೇಶ ನೀಡಿದರು.