ವಿಜಯಪುರ: ಯುವತಿಯ ಜೊತೆಗೆ ಮಾತನಾಡಿದಕ್ಕೆ ಓರ್ವನ್ನು ಎಂಟು ಜನರು ಕೂಡಿಕೊಂಡು ಬರ್ಬರವಾಗಿ ಹತ್ಯೆಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಕಡಣಿ ಗ್ರಾಮದಲ್ಲಿ ನಡೆದಿದೆ.
ಬಸೀರ್ ಮುಲ್ಲಾ, ರಿಯಾಜ್ ಮುಲ್ಲಾ, ಲಾಲಸಾಬ್ ಮುಲ್ಲಾ, ಶಕೀಲ್ ಮುಲ್ಲಾ, ರಾಜು ಮುಲ್ಲಾ, ರಸೀದ್ ಮೋರಟಗಿ, ಮೈನೂದ್ದಿನ ಮುಲ್ಲಾ, ಆರೀಫ್ ಮುಲ್ಲಾ ಹತ್ಯೆಗೈದಿದ್ದಾರೆ. ಇನ್ನು ಆಯಿಶಾ ಮೋರಟಗಿ ಜೊತೆಗೆ ಮಾತನಾಡಿದ ಪ್ರಶಾಂತ ಕ್ಷತ್ರಿನ್ನು ಆಯುಧದಿಂದ ಹತ್ಯೆಗೈದು ಪರಾರಿಯಾಗಿದ್ದಾರೆ.
ಇನ್ನು ಮೈನೂದ್ದಿನ ಮೋರಟಗಿ ಹಾಗೂ ಆರೀಫ್ ಮುಲ್ಲಾ ಈ ಇಬ್ಬರು ಕೂಡಿಕೊಂಡು ಪ್ರಶಾಂತನ್ನು ಕರೆದುಕೊಂಡು ಹೋಗಿ ಎಂಟು ಜನರು ಹತ್ಯೆ ಮಾಡಿದ್ದಾರೆ ಎಂದು ದೂರಿನಲ್ಲಿ ಪ್ರಭು ಕ್ಷತ್ರಿ ತಿಳಿಸಿದ್ದಾರೆ. ಈ ಕುರಿತು ಆಲಮೇಲ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.