ವಿಜಯಪುರ: ಅಕ್ರಮ ಅಂಗಡಿಗಳ ತೆರವು ಕಾರ್ಯಾಚರಣೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡ ಪಟ್ಟಣದ ಮುಖ್ಯ ಬಜಾರ್ ನಲ್ಲಿ ನಡೆಯಿತು. ನಾಲತವಾಡ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಎಸ್ ಎಸ್ ಬಾಗಲಕೋಟ ನೇತೃತ್ವದಲ್ಲಿ ನಗರೋತ್ಥಾನ ಹಂತ 4ರಲ್ಲಿ ಚರಂಡಿ ನಿರ್ಮಾಣ ಹಿನ್ನೆಲೆ ಅಂಗಡಿಗಳನ್ನು ತೆರವುಗೊಳಿಸಲಾಯಿತು. ಈ ವೇಳೆ ಇಂಜಿನಿಯರ್ಗಳಾದ ಬಡಿಗೇರ, ವಿರೇಶ, ಅನಿಲ್ ಚಟ್ಟೇರ, ಪ್ರಕಾಶ ಸಜ್ಜನ ಇದ್ದರು.