ವಿಜಯಪುರ: ಹಿಂದೂತ್ವದ ಜೊತೆ ಅಭಿವೃದ್ಧಿ ಕೆಲಸ ಕಾರ್ಯ ಮಾಡಿದ್ದೇನೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ವಿಜಯಪುರ ನಗರದ ಗುರುಕುಲ ರಸ್ತೆಯಲ್ಲಿ ಗುರುವಾರ ಪ್ರಚಾರ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದ ಅವರು,
ಹಿಂದೂಯೇತರ ಅಭ್ಯರ್ಥಿಗಳಿಗೆ ಬೆಂಬಲಿಸೋ ತಾಯಗಂಡರು ಇಲ್ಲ. ಎಲ್ಲರೂ ಬಿಜೆಪಿಗೆ ಬೆಂಬಲಿಸಬೇಕೆಂದು ಮನವಿ ಮಾಡಿದರು. ಕೆಲ ಕುತಂತ್ರಿಗಳು ಆಟವಾಡುತ್ತಾರೆ. ಯಾರು ಯಾರ ಗಾಡಿಯಲ್ಲಿ ತಿರುಗಾಡುತ್ತಾರೆ ಎಂಬುದು ಗೊತ್ತು ಇದೆ ಎಂದು ಪರೋಕ್ಷವಾಗಿ ಸ್ವಪಕ್ಷಿಯ ಮಾಜಿ ಸಚಿವ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ ಹಾಗೂ ವಿರೋಧಿಗಳಿಗೆ ಟಾಂಗ್ ನೀಡಿದರು. ಸರಳವಾಗಿ ನಾಮಪತ್ರ ಸಲ್ಲಿಸುತ್ತೆನೆ. ನಮ್ಮ ಹಿಂದೂ ಸಮಾಜದ ಮತದಾರರು ನೂರಕ್ಕೆ ನೂರರಷ್ಟು ಮತದಾನ ಮಾಡಬೇಕು. ಮೇ 13 ರಂದು ವಿಜಯೋತ್ಸವ ಮಾಡೋಣಾ ಎಂದರು.
ಹಿಂದೂತ್ವ ಒಂದಾಗಬೇಕು – ಯತ್ನಾಳ ಕರೆ
![ಹಿಂದೂತ್ವ ಒಂದಾಗಬೇಕು – ಯತ್ನಾಳ ಕರೆ ಹಿಂದೂತ್ವ ಒಂದಾಗಬೇಕು – ಯತ್ನಾಳ ಕರೆ](https://karnataka1news.com/wp-content/uploads/2023/04/IMG-20230413-WA0088-860x388.jpg)