ವಿಜಯಪುರ: ಕುಡಿದ ನಶೆಯಲ್ಲಿ ರಸ್ತೆ ಬದಿಯ ಹೋಟೆಲ್ಗಳಿಗೆ ಕಾರು ನುಗ್ಗಿ 5ಕ್ಕು ಅಧಿಕ ಹೋಟೆಲ್ಗಳ ಪೀಠೋಪಕರಣಗಳು ಹಾನಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದಲ್ಲಿ ನಡೆದಿದೆ.
ಸಾರವಾಡ ಗ್ರಾಮದ ರಸ್ತೆ ಬದಿಯಲ್ಲಿದ್ದ ಹತ್ತಾರು ಗೂಡಂಗಡಿ ಹೋಟೆಲ್ಗೆ
KA28 M 9169 ನಂಬರ್ ನ ಮಹೀಂದ್ರಾ ಕಾರು ನುಗ್ಗಿದೆ. ಈ ವೇಳೆಯಲ್ಲಿ ಹೋಟೆಲ್ನಲ್ಲಿ ಮಲಗಿದ್ದವರು ಕೂದಲೆಳೆ ಅಂತರದಲ್ಲಿ ಪಾರು ಆಗಿದ್ದು, ವಿಜಯಪುರ ನಗರದ ವಿಠ್ಠಲ ಗೂಗ್ಯಾಳ್ ಎಂಬುವರಿಗೆ ಸೇರಿದ ಕಾರಿನಿಂದ ಅವಘಡ ಸಂಭವಿಸಿದೆ. ಕುಡಿದ ಮತ್ತಿನಲ್ಲಿದ್ದ ಡ್ರೈವರ್ನನ್ನ ಹಿಡಿದು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಬಲೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.