ವಿಜಯಪುರ: ಕೆನಾಲ್ಗೆ ಜಾರಿ ಬಿದ್ದು ರೈತ ನಾಪತ್ತೆಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಕರಕೋಳ ಗ್ರಾಮದಲ್ಲಿ ನಡೆದಿದೆ. ರೇವಣಸಿದ್ಧ ಕೈನೂರ (30) ಕೆನಾಲ್ಗೆ ಬಿದ್ದಿರುವ ರೈತ. ನಿನ್ನೆ ಸಾಯಂಕಾಲ ಜಮೀನಿಗೆ ನೀರು ಹಾಯಿಸಿ ಮೋಟರ್ ಬಂದ ಮಾಡಲು ಹೋದಾಗ ಕಾಲು ಜಾರಿ ಕೆನಾಲ್ಗೆ ಬಿದ್ದಿದ್ದಾರೆ. ಇನ್ನು ಅಗ್ನಿ ಶಾಮಕ ದಳದವರಿಗೆ ಮಾಹಿತಿ ನೀಡಿದರು ಯಾವುದೇ ಪ್ರಯೋಜನವಾಗಿಲ್ಲ. ರೈತ ಪತ್ತೆಗಾಗಿ ಯಾರು ಮುಂದಾಗಿಲ್ಲ. ಗ್ರಾಮಸ್ಥರೇ ರೈತನಿಗಾಗಿ ಹುಡುಕಾಟ ಪ್ರಾರಂಭಿಸಿದ್ದಾರೆ. ದೇವರಹಿಪ್ಪರಗಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.