ವಿಜಯಪುರ: ಸಾಲಬಾಧೆ ತಾಳಲಾರದೆ ರೈತ ಬಾವಿಗೆ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯಪುರ ಜಿಲ್ಲೆಯ
ದೇವರಹಿಪ್ಪರಗಿ ಪಟ್ಟಣದ ಚಟ್ಟರಕಿ ಗ್ರಾಮದಲ್ಲಿ ಸೋಮವಾರ ನಡೆದಿದೆ. 35 ವರ್ಷದ ಶ್ರೀಶೈಲ ಹಲಸಂಗಿ ಮೃತಪಟ್ಟಿರುವ ದುರ್ದೈವಿ. ತಾಂಬಾ ಡಿಸಿಸಿ ಬ್ಯಾಂಕ್, ಪಿಕೆಪಿಎಸ್, ಗ್ರಾಮೀಣ ಬ್ಯಾಂಕಿನಲ್ಲಿ ಸಾಲ ಹಿನ್ನಲೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ದೇವರಹಿಪ್ಪರಗಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಸಾಲಕ್ಕೆ ಹೆದರಿ ಬಾವಿಗೆ ಹಾರಿದ ರೈತ.. ಮುಂದೇನಾಯ್ತು…?
![](https://karnataka1news.com/wp-content/uploads/2022/12/IMG_20221226_145725-860x480.jpg)