ರಾಮನಗರ: ಹಣಕ್ಕಾಗಿ(Money) ಹೆತ್ತ ಮಗನ್ನೇ ತಂದೆಯೋರ್ವ(Father) ಹತ್ಯೆಗೈದಿರುವ ಘಟನೆ ರಾಮನಗರ ತಾಲೂಕಿನ ಲಕ್ಕೋಜನಹಳ್ಳಿ ಗ್ರಾಮದಲ್ಲಿ ನಡೆದಿದೆ. ಭಾಸ್ಕರ್ (31) ಹತ್ಯೆಯಾಗಿರುವ ದುರ್ದೈವಿ. ಕೃಷ್ಣಪ್ಪ ಕೊಲೆಗೈದಿರುವ ಆರೋಪಿ. ಹಣದ ವಿಚಾರಕ್ಕೆ ಹರಿತವಾದ ಮಚ್ಚಿನಿಂದ ಮಗನ ಮುಖಕ್ಕೆ ಹೊಡೆದ ಹತ್ಯೆ ಮಾಡಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಾಮನಗರ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.