ವಿಜಯಪುರ: ವಿಜಯಪುರ: ನ್ಯಾಯಮೂರ್ತಿ
ಸದಾಶಿವ ಆಯೋಗ ವರದಿ ಜಾರಿಗೊಳಿಸುವ ಮೂಲಕ ಬಿಜೆಪಿ ಸರ್ಕಾರ ಒಡಹುಟ್ಟಿದ ಸಹೋದರರಂತಿರುವ ಪರಿಶಿಷ್ಟ ಜಾತಿಯನ್ನು ಒಡೆದು ಒಳ ಜಗಳ ಹಚ್ಚುವ ಕೆಲಸ ಮಾಡಿದೆ ಎಂದು ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ ಅಸಮಾಧಾನ ಹೊರಹಾಕಿದರು. ವಿಜಯಪುರ ನಗರದಲ್ಲಿ ಮಂಗಳವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು,
ಸರ್ಕಾರದ ಈ ಧೋರಣೆಯಿಂದ ಸಮಾಜದಲ್ಲಿ ಸಂಘರ್ಷ ಏರ್ಪಟ್ಟು ಅಶಾಂತಿ ಮತ್ತು ಅರಾಜಕತೆ ಸೃಷ್ಠಿಯಾಗಲಿದೆ. ಸರ್ಕಾರದ ಈ ನಿರ್ಧಾರವನ್ನು ಖಂಡಿಸುವುದಾಗಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಕೇಂದ್ರ ಸರ್ಕಾರ 1976 ರಲ್ಲಿ ಸಂಸತ್ ನಲ್ಲಿ ಬಿಲ್ ಪಾಸ್ ಮಾಡುವ ಮೂಲಕ ಹಿಂದುಳಿದ ಬುಡಕಟ್ಟು ಜನಾಂಗಗಳಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಿತ್ತು. ಆದರೆ, ರಾಜ್ಯ ಬಿಜೆಪಿ ಸರ್ಕಾರ ಅವೈಜ್ಞಾನಿಕವಾಗಿರುವ ನ್ಯಾ.ಸದಾಶಿವ ಆಯೋಗ ಜಾರಿಗೊಳಿಸಿರುವುದು ಸಂಪೂರ್ಣ ಅಸಂವಿಧಾನಿಕ ನಿರ್ಣಯವಾಗಿದೆ ಎಂದರು. ಈಗಲಾದರೂ ಹೊರ ಬಂದು ಹೋರಾಟ ಮಾಡಿ, ಸಮಯ ಮೀರಿಲ್ಲ. ಸರ್ಕಾರದ ಮೇಲೆ ಒತ್ತಡ ತಂದು ಸಮಾಜಕ್ಕೆ ನ್ಯಾಯ ಕಲ್ಪಿಸಲು ಶ್ರಮಿಸಿ ಎಂದರು. ಬಂಜಾರಾ ಸಮುದಾಯದ ಬಗ್ಗೆ ಹೆಮ್ಮೆಯಿಂದ ಮಾತನಾಡುವ ದೆಹಲಿ ಬಿಜೆಪಿ ನಾಯಕರು ಈಗ ಎಲ್ಲಿದ್ದಾರೆ? ರಾಜ್ಯ ಬಂಜಾರಾ ಸಮುದಾಯ ಬರುವ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು. ಪ್ರತಿಭಟನೆ ಮಾಡಬೇಕು. ಶಕ್ತಿ ಪ್ರದರ್ಶನ ಮಾಡಲೇಬೇಕು ಎಂದರು.
ಸರ್ಕಾರದ ಧೋರಣೆ, ಸಂಘರ್ಷಕ್ಕೆ ಕಾರಣ
![](https://karnataka1news.com/wp-content/uploads/2023/03/IMG_20230328_102224-scaled-1-860x387.jpg)