ವಿಜಯಪುರ: ಬಿಜೆಪಿ ಬಿಟ್ಟು ಕಾಂಗ್ರೆಸ್ ಗೆ ಹೋದ್ರೆ ಅದು ಮರಣ ಶಾಸನ. ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ಪಡೆ ಆಗ್ತಿರೋರಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಎಚ್ಚರಿಕೆ ನೀಡಿದರು. ವಿಜಯಪುರ ನಗರದಲ್ಲಿ ಬುಧವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬರೋದಿಲ್ಲ. ರಾತ್ರಿ ಕಂಡ ಬಾವಿಗೆ ಹಗಲು ಹೋಗಿ ಬಿದ್ದಂತೆ ಕಾಂಗ್ರೆಸ್ ಈಗ ಡೌನ್ ಆಗಿದೆ. ಮೂರ್ನಾಲ್ಕು ತಿಂಗಳ ಹಿಂದೆ ಕಾಂಗ್ರೆಸ್ ಏರಿಕೆ ಕಂಡಿತ್ತು. ಈಗ ಮತ್ತೆ ಡೌನ್ ಆಗಿದೆ, ಅಧಿಕಾರಕ್ಕೆ ಬರೋದಿಲ್ಲ ಎಂದರು. ಬಿಜೆಪಿಯಲ್ಲಿ ಇದ್ರೆ ಸೇಫ್, ಇಲ್ಲೆ ಇದ್ದು ಗೆದ್ದು ಸಂತಸದಿಂದ ಮಂತ್ರಿಯಾಗೋದು ಒಳ್ಳೆಯದು ಎಂದರು. ಚುನಾವಣೆಯಲ್ಲಿ ಗಿಫ್ಟ್ ಹಂಚೋರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮವಾಗಬೇಕು. ಗಡಿಯಾರ, ಸೀರೆ, ಕುಕ್ಕರ್ ಒಂದು ಮತ ಕಿಮ್ಮತ್ತು ಆಗುತ್ತಾ ಎಂದ ಯತ್ನಾಳ್ ವಾಗ್ದಾಳಿ ನಡೆಸಿದರು. ಅಲ್ಲದೇ, ನಾನು ಗಿಫ್ಟ್ ಪಾಲಿಟಿಕ್ಸ್ಗೆ ವಿರೋಧವಾಗಿದ್ದೀನಿ. ನಾನು ಏನು ಹಂಚೋದಿಲ್ಲ, ಸಾಧನೆ ನೋಡಿ ಓಟ್ ಹಾಕಿ ಅಂತಾ ಹೇಳಿದ್ದೇನೆ. ದೀಪಾವಳಿಯಲ್ಲಿ ಗಿಫ್ಟ್ ನೀಡಿದ್ದೇನೆ. ಆಗ ಎಲ್ಲರು ಕೊರೊನಾದಿಂದ ಸಂಕಷ್ಟದಲ್ಲಿದ್ದರು. ಈಗ ಕೆಲ ಮಂದಿ ಸಕ್ಕರೆ ಹಂಚ್ತಿದ್ದಾರೆ. ಚುನಾವಣಾಧಿಕಾರಿಗಳು ಕಟ್ಟುನಿಟ್ಟಾಗಿ ನಿರ್ಭಂದಿಸಬೇಕು ಎಂದರು.