ವಿಜಯಪುರ: ಭೀಮಾತೀರದ ನಟೋರಿಯಶ್ ಹಂತಕ ಮಲ್ಲಿಕಾರ್ಜುನ ಚಡಚಣ ಧರ್ಮಪತ್ನಿ ವಿಮಲಾಬಾಯಿ ಚಡಚಣ ಹಾಗೂ ಸಹಚರ ಸೋನ್ಯಾ ರಾಠೋಡ ವಿಜಯಪುರ ಜಿಲ್ಲಾ 4ನೇ ಜೆಎಂಎಫ್ಸಿ ಕೋರ್ಟ್ಗೆ ಶರಣಾಗಿದ್ದಾರೆ.
ಭೀಮಾತೀರದ ರೌಡಿಶೀಟರ್ ಮಹಾದೇವ ಬೈರಗೊಂಡ ಊರ್ಫ್ ಸಾಹುಕಾರ್ ಹತ್ಯೆಗೆ ನವೆಂಬರ್ 2ರಂದು ಸಂಚು ರೂಪಿಸಿ, ಸಿನಿಮಾ ಸ್ಟೈಲ್ ನಲ್ಲಿ ಹತ್ಯೆಗೆ ಯತ್ನಿಸಿದ್ದರು. ಇನ್ನು ಇದಾದ ಬಳಿಕ ನಿಗೂಢವಾಗಿ ನಾಪತ್ತೆಯಾಗಿದ್ದ ವಿಮಲಾಬಾಯಿ ಚಡಚಣ ಇಂದು ಕೋರ್ಟ್ಗೆ ಶರಣಾಗಿದ್ದಾರೆ. ಸಾಹುಕಾರ್ ಹತ್ಯೆಗೆ ಯತ್ನಿಸಿದ್ದ ಎರಡನೆ ಆರೋಪಿಯಾಗಿ ವಿಮಲಾಬಾಯಿ ಚಡಚಣ ಹಾಗೂ 39ನೇ ಆರೋಪಿ ಸೋನ್ಯಾ ರಾಠೋಡ ಬಂಧನವಾಗಿದೆ.
ಅಲ್ಲದೇ, ಮಲ್ಲಿಕಾರ್ಜುನ ಚಡಚಣ ಶರಣಾಗತಿಗೆ ಉದ್ಘೋಷಣೆ ಹೊರಡಿಸಲಾಗಿತ್ತು. ಇದೀಗ್ ಹಂತಕ ಮಲ್ಲಿಕಾರ್ಜುನ ಚಡಚಣ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.