ವಿಜಯಪುರ: ಸಾಲಭಾದೆ ತಾಳಲಾರದೆ ವ್ಯಕ್ತಿ ಬಾವಿಗೆ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಈರಯ್ಯ ಕಾಸಯ್ಯ ಗದ್ದಗಿಮಠ 41 ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಮನೆಯಿಂದ ಹೋಗಿದ್ದ ಈರಯ್ಯ ನಾಲ್ಕೂ ದಿನದಿಂದ ಕಾಣೆಯಾಗಿದ್ದ. ಇಂದು ಬಾವಿಯಲ್ಲಿ ಶವ ಪತ್ತೆಯಾಗಿದ್ದು. ಕಲಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.