ವಿಜಯಪುರ: ಕಿಡಿಗೇಡಿಗಳು ಚಹಾದ ಅಂಗಡಿಗೆ ಬೆಂಕಿ ಹಚ್ಚಿರುವ ಘಟನೆ ವಿಜಯಪುರ ನಗರದ ಬಾಲಕರ ಮಂದಿರದ ಪಕ್ಕದಲ್ಲಿ ನಡೆದಿದೆ.
ಆರೋಗ್ಯದಾಯಿ ಬೆಲ್ಲದ ಚಹಾಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಇನ್ನು ಬೆಂಕಿ ಅವಘಡದಿಂದ 4 ಲಕ್ಷದಷ್ಟು ಹಾನಿ ಆಗಿದೆ. ಅಲ್ಲದೇ, ಚಹಾದ ಅಂಗಡಿಯಲ್ಲಿದ್ದ ಲಕ್ಷಾಂತರ ಮೌಲ್ಯದ ವಸ್ತುಗಳ ಭಸ್ಮವಾಗಿವೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಲನಗರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.