ವಿಜಯಪುರ: ಕೃಷ್ಣ ಯೋಜನೆ ಸಮಾವೇಶಕ್ಕೂ ಮೊದಲೇ ರಾಜಕೀಯ ಚದುರಂಗ ಆಟ ಆರಂಭವಾಗಿದೆ. ಕೃಷ್ಣ ಯೋಜನೆ ಸಮಾವೇಶ ಹಿನ್ನೆಲೆ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮ್ಮಿದ್ ಮುಶ್ರಿಫ್ನ ಬ್ಯಾನರ್ನ್ನು ಕಿಡಿಗೇಡಿಗಳ ಹರಿದು ಹಾಕಿದ್ದಾರೆ. ವಿಜಯಪುರ ನಗರದ ದರ್ಬಾರ್ ಮೈದಾನದ ಬಳಿ ಅಳವಡಿಸಿದ ಬೃಹತ್ ಮುಶ್ರಿಫ್ ಬ್ಯಾನರ್ನ್ನು ಯಾರೋ ಕಿಡಿಗೇಡಿಗಳು ಹರಿದು ಹಾಕಿ ಪರಾರಿಯಾಗಿದ್ದಾರೆ. ಅಲ್ಲದೇ, ಇದರ ಹಿಂದೆ ಕಾಣದ ಕೈಗಳ ಕೈವಾಡ ಇದೆ ಎಂದು ಆರೋಪಗಳು ಕೇಳಿ ಬರುತ್ತಿವೆ. ಮುಶ್ರಿಫ್ಗೆ ಕೈ ಟಿಕೆಟ್ ತಪ್ಪಿಸಲು ಈ ಕುತಂತ್ರ ಮಾಡಿದ್ದಾರೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬಂದಿದೆ. ಗೋಳಗುಮ್ಮಟ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.