ವಿಜಯಪುರ: ಕಳೆದುಕೊಂಡಿದ್ದ ಚಿನ್ನದ ವಸ್ತುಗಳನ್ನು ನಾಲ್ಕು ಗಂಟೆಯಲ್ಲಿ ಪೊಲೀಸರು ಪ್ರಕರಣ ಭೇದಿಸಿ ಚಿನ್ನವನ್ನು ದಂಪತಿಗೆ ನೀಡಿರುವ ಘಟನೆ ವಿಜಯಪುರ ನಗರದ ಗಾಂಧಿಚೌಕ್ ಪೊಲೀಸ ಠಾಣೆಯಲ್ಲಿ ನಡೆದಿದೆ. ರವೀಂದ್ರ ಯರನಾಳ ಆಟೋದಲ್ಲಿ 9 ತೊಲಿ ಚಿನ್ನದ ಬ್ಯಾಗ್ ಬಿಟ್ಟು ಹೋಗಿದ್ದರು. ಅದಕ್ಕಾಗಿ ದಂಪತಿ ದೂರು ನೀಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಕೈಗೊಂಡು ನಾಲ್ಕು ಗಂಟೆಯಲ್ಲಿ ಚಿನ್ನದ ವಸ್ತುಗಳನ್ನು ಪತ್ತೆ ಹಚ್ಚಿದ್ದಾರೆ. ಅಲ್ಲದೇ, ಚಿನ್ನದ ವಸ್ತುಗಳನ್ನು ಆಟೋ ಚಾಲಕ ರಫೀಕ್ ಕನ್ನೂರ ತನ್ನ ರೂಮ್ನಲ್ಲಿ ಇಟ್ಟಿದ್ದಾನೆ. ತದನಂತರ ಪೊಲೀಸರು ಆಟೋ ಚಾಲಕನ ಪತ್ತೆ ಹಚ್ಚಿ ರೂಮ್ನಲ್ಲಿದ್ದ ಚಿನ್ನವನ್ನು ಮರಳಿ ನೀಡಿದ್ದಾರೆ. ಅದಕ್ಕಾಗಿ ಆಟೋ ಚಾಲಕ ರಫೀಕ್ ಕನ್ನೂರಗೆ ಪೊಲೀಸರು ಸನ್ಮಾನಿಸಿ ಗೌರವಿಸಿದರು. ಸಿಪಿಐ ದ್ಯಾಮಣ್ಣವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಗಾಂಧಿಚೌಕ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.