ವಿಜಯಪುರ: ನಕಲಿ ಪತ್ರಕರ್ತರ ವಿರುದ್ಧ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಎಸ್ಪಿ ಎಚ್ಡಿ ಆನಂದಕುಮಾರ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಬಾಲಾಜಿ ಮೆಟಲ್ಸ್ ಇಂಡಸ್ಟ್ರಿಯಲ್ ಅಂಗಡಿಗೆ ಹೋಗಿ ಬ್ಲ್ಯಾಕ್ ಮೇಲ್ ಮಾಡಿ, ಕಾನೂನು ಕೈಗೆ ತೆಗೆದುಕೊಂಡಿದ್ದಾರೆ. ಇನ್ನು ಪತ್ರಕರ್ತರು, ಅಂಗಡಿ ಮಾಲೀಕರು ಎರಡು ಕಡೆಯಿಂದ ಕೇಸ್ ನೀಡಿದ್ದಾರೆ. ಅದಕ್ಕಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಪೊಲೀಸ ತನಿಖೆ ಬಳಿಕ ಸತ್ಯಾಸತ್ಯತೆ ತಿಳಿದುಬರುತ್ತದೆ ಎಂದರು.