ರಾಜಧಾನಿ ಜನರಿಗೆ ಬೆಳಗ್ಗೆ ಶಾಕ್ ಕೊಟ್ಟ ತುಂತುರು ಮಳೆ: ಜನರ ಪರದಾಟ

Madiwal
By Madiwal
ರಾಜಧಾನಿ ಜನರಿಗೆ ಬೆಳಗ್ಗೆ ಶಾಕ್ ಕೊಟ್ಟ  ತುಂತುರು ಮಳೆ:  ಜನರ ಪರದಾಟ

ಬೆಂಗಳೂರು:

ಕಳೆದ ಮೂರು ನಾಲ್ಕು ದಿನಗಳಿಂದ ರಜೆಯಲ್ಲಿರುವ ಜನರು ಇಂದು ಮತ್ತೆ ತಮ್ಮ ಕೆಲಸಗಳಿಗೆ ತೆರಳಲು ರಾಜಧಾನಿ ಬೆಂಗಳೂರಿಗೆ ಬರುತ್ತಿರುವಾಗ ಬೆಳಗ್ಗೆ ಜಾವ ಮಳೆರಾಯ ಬಾರಿ ಸ್ವಾಗತ ಕೋರಿದ್ದಾನೆ.

ಹೌದು ದಸರಾ ಹಬ್ಬದ ನಿಮಿತ್ತವಾಗಿ ತಮ್ಮತಮ್ಮ ಗ್ರಾಮಗಳಿಗೆ ತೆರಲಿದ ಜನರು ಖಾಸಗಿ ಹಾಗೂ ಸರ್ಕಾರಿ ಬಸ್ ಗಳ ಮೂಲಕ ಬೆಂಗಳೂರಿಗೆ ಬೆಳಗಿನ ಜಾವ ಸಮೀಪಿಸುತ್ತಿದಂತೆ ತುಂತುರು ಮಳೆ ಕಂಡಿದ್ದು ಜನರಿಗೆ ತಮ್ಮ ಕಛೇರಿಗಳಿಗೆ ಬೇಗ ಹೇಗೆ ಹೋಗಬೇಕು ಎಂಬ ಚಿಂತೆ ಉಂಟು ಮಾಡಿದೆ.

ನೆಲಮಂಗಳ ದಿಂದ ಗುರಗುಂಟೆಪಾಳೆಯವರೆಗೆ ಇರುವ ವಾಹನಗಳ ಸರದಿ ಸಾಲು ಮತ್ತಷ್ಟು ಜನರಿಗೆ ಸಮಯದ ಅಭಾವ ಆಗುತ್ತದೆ ಎಂದು ಎತ್ತಿ ತೋರಿದೆ. ಶಾಲೆಗಳು ಸಹ ಇಂದಿನಿಂದ ಪ್ರಾರಂಭವಾಗಿದ್ದು, ಏಕಕಾಲದಲ್ಲಿ ವಾಹನಗಳು ರಸ್ತೆಗಿಳಿದ ಪರಿಣಾಮ ಸಂಚಾರ ದಟ್ಟಣೆ ಉಂಟಾಗಿತ್ತು. ಇದರಿಂದ ದ್ವಿಚಕ್ರ ವಾಹನ ಸವಾರರು ಮಳೆಯಲ್ಲಿ ತೊಯ್ದುಕೊಂಡೇ ತಮ್ಮ ಕಚೇರಿ ಮತ್ತು ಕೆಲಸ ಕಾರ್ಯಗಳಿಗೆ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";