ವಿಜಯಪುರ: ಬಸ್ನಿಂದ ಇಳಿಯುವಾಗ ಮಹಿಳೆಯ ಬ್ಯಾಗ್ನ್ನು ಕಳ್ಳರು ಕಳ್ಳತನಗೈದು ಎಸ್ಕೇಪ್ ಆಗಿರುವ ಘಟನೆ ವಿಜಯಪುರ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ. ಜ್ಯೋತಿ ಪರಿಟ್ ಎಂಬುವರ ಬ್ಯಾಗ್ ಕಳ್ಳತನ ಆಗಿದೆ. ಇನ್ನು ಬ್ಯಾಗ್ನಲ್ಲಿದ್ದ 2 ತೊಲಿ ಚಿನ್ನ, 3 ತೊಲಿ ಬೆಳ್ಳಿ, 5 ಸಾವಿರ ನಗದು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ಇನ್ನು ಚಿನ್ನ, ಬೆಳ್ಳಿ ಕಳೆದುಕೊಂಡಿರುವ ಜ್ಯೋತಿ ಕಣ್ಣೀರು ಹಾಕುತ್ತಿದ್ದಾರೆ. ಗಾಂಧಿಚೌಕ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.