ತೆಲಂಗಾಣ: ಭೀಕರ ಅಪಘಾತದಲ್ಲಿ ತಂದೆಯೋರ್ವ ಸ್ಥಳದಲ್ಲಿಯೇ ಅಸುನೀಗಿದ್ದು, ಮುಗ್ಧ ಮಗ ಮಾತ್ರ ತಂದೆಯ ಶವ ಪಕ್ಕದಲ್ಲಿ ಇಡೀ ರಾತ್ರಿ ಮಲಗಿರುವ ಘಟನೆ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಇಂದಲವಾಯಿ ಮಂಡಲದ ವೆಂಗಲ್ಪಾಡ್ನಲ್ಲಿ ನಡೆದಿದೆ. ಮಲವತ್ ರೆಡ್ಡಿ (34) ಎಂಬಾತ ತನ್ನ ಮೂರು ವರ್ಷದ ಮಗ ನಿತಿನ್ ಜೊತೆ ಕಾರ್ಯಕ್ರಮದ ನಿಮಿತ್ತ ಕಾಮರೆಡ್ಡಿ ಜಿಲ್ಲೆಯ ಸಂಬಂಧಿಕರ ಮನೆಗೆ ತೆರಳಿದ್ದರು. ಅಲ್ಲಿಂದ ರಾತ್ರಿ ದ್ವಿಚಕ್ರ ವಾಹನದಲ್ಲಿ ತಮ್ಮ ಮನೆಯತ್ತ ಹಿಂತಿರುಗುತ್ತಿದ್ದರು. ಆದರೆ, ಈ ವೇಳೆ ಸದಾಶಿವನಗರ ಮಂಡಲದ ಡಗ್ಗಿ ಎಂಬ ಅರಣ್ಯ ಪ್ರದೇಶದ ರಸ್ತೆ ಬದಿಯಲ್ಲಿದ್ದ ಬ್ಯಾರಿಕೇಡ್ಗೆ ಬೈಕ್ ಡಿಕ್ಕಿ ಹೊಡೆದಿದೆ. ಅದಕ್ಕಾಗಿ ತಂದೆ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಆದ್ರೇ, ಇದನ್ನು ಅರಿಯದ ಬಾಲಕ ತನ್ನ ತಂದೆಯನ್ನು ಎಬ್ಬಿಸಲು ಸಾಕಷ್ಟು ಪ್ರಯತ್ನ ಮಾಡಿದ್ದಾನೆ. ಸುತ್ತಲೂ ಕತ್ತಲಾಗಿದ್ದರಿಂದ ನನಗೆ ಹಸಿವಾಗಿದೆ, ಮನೆಗೆ ಹೋಗೋಣ ಏಳಪ್ಪ ಅಂತ ಅತ್ತು ಅತ್ತು ಸುಸ್ತಾಗಿ ನಿತಿನ್ ತಂದೆಯ ಶವದ ಬಳಿಯೇ ನಿದ್ರೆ ಮಾಡಿದ್ದಾನೆ.