ವಿಜಯಪುರ: ಕಾರಿನ ಗ್ಲಾಸ್ ಒಡೆದು ಕಾರಿನಲ್ಲಿದ್ದ ಮೂರು ಲಕ್ಷ ಹಣವನ್ನು ಕಳ್ಳರು ದೋಚಿಕೊಂಡು ಪರಾರಿಯಾಗಿರುವ ಘಟನೆ ವಿಜಯಪುರ ನಗರದ ಟೆಕ್ಕೆಯಲ್ಲಿ ನಡೆದಿದೆ.
ನಗರ ನಿವಾಸಿ ನಿತಿನ್ ಗವಾಯಿಯ ಮೂರು ಲಕ್ಷ ಹಣ ಕಳ್ಳತನವಾಗಿದೆ. ಅಲ್ಲದೇ, ಕಾರಿನಲ್ಲಿ ಹಣವಿಟ್ಟು ಅಂಗಡಿಗೆ ಹೋದಾಗ ಕಳ್ಳರು ಕಾರಿನ ಮುಂಭಾಗದ ಗ್ಲಾಸ್ ಒಡೆದು ನಗದು ತೆಗೆದುಕೊಂಡು ಪರಾರಿಯಾಗಿದ್ದಾನೆ. ವಿಜಯಪುರ ಗಾಂಧಿಚೌಕ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.