ವಿಜಯಪುರ: ವಿಜಯಪುರ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಪದೇ ಪದೇ ಕಳ್ಳತನ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಜಿಲ್ಲಾ ಪೊಲೀಸ ಇಲಾಖೆಯ ಸಿಬ್ಬಂದಿಗಳನ್ನು ಬಸ್ ನಿಲ್ದಾಣದಲ್ಲಿ ನಿಯೋಜನೆ ಮಾಡಲಾಗಿದೆ. ಇನ್ನು ಬಸ್ ನಿಲ್ದಾಣದಲ್ಲಿ ಪೊಲೀಸ ಸಿಬ್ಬಂದಿಗಳಿಗೆ ಪೊಲೀಸ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಆದ್ರೇ, ಪೊಲೀಸ ಸಿಬ್ಬಂದಿಗಳು ಕೊಠಡಿಯ ಬಾಗಿಲು ಹಾಕಿಕೊಂಡು ಮೊಬೈಲ್ನಲ್ಲಿ ಫುಲ್ ಬಿಜಿ ಆಗಿದ್ದಾರೆ. ಕಳ್ಳರ ಬಗ್ಗೆ ಮಾಹಿತಿ ಕೇಳಿದ್ರೇ ಕಳ್ಳತನ ಆದ್ರೇ ನಾವೇನು ಮಾಡೋಣ.. ಠಾಣೆಗೆ ಹೋಗಿ ಕೇಸ್ ನೀಡು ಅಂತಾ ಕೈ ಚೆಲ್ಲುತ್ತಾರೆ. ಪ್ರಯಾಣಿಕರ ಸುರಕ್ಷಿತವಾಗಿ ಬಸ್ ಸಂಚಾರ ಮಾಡಲಿ. ಬಸ್ ನಿಲ್ದಾಣದಲ್ಲಿ ಯಾವುದೇ ಅಹಿತಕರ ಘಟನೆಗಳು ಆಗದಂತೆ ಹಾಗೂ ಕಳ್ಳತನ ಆಗದಂತೆ ಪೊಲೀಸ ನಿಯೋಜನೆ ಮಾಡಿದ್ರೇ ಕೆಲವು ಪೊಲೀಸರು ತಮ್ಮಿಷ್ಟದಂತೆ ಬಾಗಿಲು ಆರಾಮವಾಗಿ ಇದ್ದಾರೆ. ಬಸ್ ನಿಲ್ದಾಣದಲ್ಲಿ ಗಸ್ತು ಮಾಡೋದು ಬಿಟ್ಟು ಮೊಬೈಲ್ನಲ್ಲಿ ಎಂಜಾಯ್ ಬಿಜಿ ಆಗೋದು ಎಷ್ಟರ ಮಟ್ಟಿಗೆ ಎನ್ನುವುದು ಸ್ಥಳೀಯರು ಹಾಗೂ ಚಿನ್ನ ಕಳೆದುಕೊಂಡವರ ಪ್ರಶ್ನೆ ಆಗಿದೆ. ಅದಕ್ಕಾಗಿ ನೂತನ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಅವರು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.